ಚಿತ್ರದುರ್ಗ: ಬಾಳೆಕಾಯಿ ಸಿದ್ದೇಶ್ವರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

Published : Jul 25, 2019, 10:35 AM ISTUpdated : Jul 25, 2019, 11:46 AM IST
ಚಿತ್ರದುರ್ಗ: ಬಾಳೆಕಾಯಿ ಸಿದ್ದೇಶ್ವರ ಬೆಟ್ಟದಲ್ಲಿ  ಚಿರತೆ ಪ್ರತ್ಯಕ್ಷ

ಸಾರಾಂಶ

ಆಹಾರಕ್ಕಾಗಿ ವನ್ಯ ಜೀವಿಗಳು ನಾಡಿನ ಕಡೆ ಮುಖ ಮಾಡುತ್ತಲೇ ಇರುತ್ತವೆ. ಚಿತ್ರದುರ್ಗದ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. ವಾಯ ವಿಹಾರಕ್ಕೆ ಬಂದವರು ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಚಿತ್ರದುರ್ಗ(ಜು.25): ಆಹಾರದ ಕೊರತೆಯಿಂದ ವನ್ಯ ಜೀವಿಗಳೂ ನಾಡಿನತ್ತ ಮುಖ ಮಾಡುತ್ತಿದೆ. ಕಾಡಾನೆ ದಾಳಿಯಂತೂ ಬಹಳ ಸಾಮಾನ್ಯವಾಗಿದ್ದು, ಇದೀಗ ಚಿರತೆಯಂತಹ ಪ್ರಾಣಿಗಳೂ ಆಹಾರವನ್ನರಸಿ ನಾಡಿನತ್ತ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಚಿತ್ರದುರ್ಗದ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. ಕುರುಮರುಡಿ ಕೆರೆ ಚಂದ್ರವಳ್ಳಿ ಗುಹೆ ಬಳಿ ಬಂಡೆಯ ಮೇಲೆ ಆಹಾರವನ್ನರಸಿ ಬಂದಿದ್ದ ಚಿರತೆ ಪ್ರತ್ಯಕ್ಷವಾಗಿದೆ. ಗ್ರಾಮದ ಬಳಿ ನಾಯಿ ಬೇಟೆಯಾಡಲು ಪ್ರಯತ್ನಿಸಿದೆ. ಕೆಲವು ಹೊತ್ತು ಚಿರತೆ ಹಾಗೂ ನಾಯಿ ಕಾಳಗ ನಡೆದಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿದ್ದು,  ಸಾರ್ವಜನಿಕರು ಮೊಬೈಲ್ ಕ್ಯಾಮರಾದಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ವಾಯು ವಿಹಾರಿಗಳ ಮೊಬೈಲ್ ನಲ್ಲಿ ಚಿರತೆ ದೃಷ್ಯ ಸೆರೆಯಾಗಿದ್ದು, ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆಯ ಬಳಿಯೂ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆ.

"

ಸಿಎಂ ನಿವಾಸದ ಬಳಿ ಚಿರತೆ: ಸಿಸಿಟಿವಿ ದೃಶ್ಯ ವೈರಲ್

PREV
click me!

Recommended Stories

"ಪೀರಿಯಡ್ಸ್ ಟೈಮಲ್ಲೂ ಸೆ*ಕ್ಸ್‌ಗೆ ಪೀಡಿಸುತ್ತಿದ್ದ"; ಟೆಕ್ಕಿ ಕಣ್ಣೀರು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಬ್ಲ್ಯಾಕ್‌ಮೇಲ್!
ಪುತ್ತೂರು ಕೃಷ್ಣನ ನವರಂಗಿ ಆಟ, ಡಿಎನ್‌ಎ ಟೆಸ್ಟ್‌ನಲ್ಲಿ ಅಪ್ಪ ಅನ್ನೋದು ಕನ್ಫರ್ಮ್‌ ಆದರೂ ಮದುವೆ ಆಗಲ್ವಂತೆ!