ಕುರುಗೋಡು ಬಳಿ ಕಾರು ಅಪಘಾತ: ಸ್ಥಳದಲ್ಲೇ ASI ದುರ್ಮರಣ

By Suvarna NewsFirst Published May 20, 2020, 12:39 PM IST
Highlights

ಕಾರು ಪಲ್ಟಿ ಕುರುಗೋಡು ಪೊಲೀಸ್‌ ಠಾಣೆಯ ಎಎಸ್ಐ ಸಾವು| ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಕಲ್ಲುಕಂಭ ಗ್ರಾಮದ ಬಳಿ ನಡೆದ ಘಟನೆ| ಮೋರಿಗೆ ಡಿಕ್ಕಿ ಹೊಡೆದು ಅಂಜುರ ತೋಟಕ್ಕೆ ನುಗ್ಗಿದ ಕಾರು|

ಬಳ್ಳಾರಿ(ಮೇ.20): ಕಾರೊಂದು ಪಲ್ಟಿಯಾದ ಪರಿಣಾಮ ಎಎಸ್ಐವೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ  ಕುರುಗೋಡು ತಾಲೂಕಿನ ಕಲ್ಲುಕಂಭ ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ. 

ಮೃತರನ್ನ ಎಎಸ್‌ಐ ಪ್ರಲ್ಹಾದ್ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಮೋರಿಗೆ ಡಿಕ್ಕಿ ಹೊಡೆದು ತೋಟಕ್ಕೆ ಕಾರು ನುಗ್ಗಿದೆ. ಮೋರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎಎಸ್‌ಐ ಪ್ರಲ್ಹಾದ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ದುರ್ಘಟನೆ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
 

click me!