ಬೆಳಗಾವಿ: ಜಮೀನು ವಿವಾದ, ಯೋಧನ ಕುಟುಂಬಕ್ಕೆ ಬಹಿಷ್ಕಾರ

Kannadaprabha News   | Asianet News
Published : Jun 17, 2021, 02:17 PM ISTUpdated : Jun 17, 2021, 02:30 PM IST
ಬೆಳಗಾವಿ: ಜಮೀನು ವಿವಾದ, ಯೋಧನ ಕುಟುಂಬಕ್ಕೆ ಬಹಿಷ್ಕಾರ

ಸಾರಾಂಶ

* ಯೋಧನ ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ  * ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ ಎಂಬುದು ಗ್ರಾಮಸ್ಥರ ವಾದ  * ಬೆಳಗಾವಿ ತಾಲೂಕಿನ ಗೌಂಡವಾಡದ ಗ್ರಾಮದಲ್ಲಿ ನಡೆದ ಘಟನೆ  

ಬೆಳಗಾವಿ(ಜೂ.17):  ಜಮೀನು ವಿವಾದ ಸಂಬಂಧ ಗ್ರಾಮಸ್ಥರು ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಗೌಂಡವಾಡದ ಯೋಧರೊಬ್ಬರು ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ದೂರು ಸಲ್ಲಿಸಿದ್ದಾರೆ. 

ತಮ್ಮ ಜಮೀನಿಗೆ ಯಾರೂ ಕೆಲಸಕ್ಕೆ ಬರುತ್ತಿಲ್ಲ. ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಯೋಧ ದೀಪಕ ಪಾಟೀಲ ಜಿಲ್ಲಾಧಿಕಾರಿ ಗಮನ ಸೆಳೆದಿದ್ದಾರೆ. 

ಬೆಳಗಾವಿ: ಪೊಲೀಸರ ಮೇಲೆಯೇ ಹಲ್ಲೆ, ಐವರ ವಿರುದ್ಧ ಕೇಸ್‌

ಗ್ರಾಮದ ಗಣಪತಿ, ಕಲ್ಮೇಶ್ವರ, ಕಾಲಭೈರವ ದೇಗುಲಕ್ಕೆ ತಮ್ಮ 5 ಎಕರೆ ಜಮೀನು ಸೇರಿದೆ ಎಂಬುದು ಗ್ರಾಮಸ್ಥರ ವಾದ. ಆದರೆ, ಈ ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ. ಇದೇ ಕಾರಣಕ್ಕೆ ಜೂ.6ರಂದು ಮನೆಗೆ ನುಗ್ಗಿ ಪಿಠೋಪಕರಣ, ಟಿವಿ ಇತರೆ ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ. ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಕಾಕತಿ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ. 
 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!