ಬೆಳಗಾವಿ: ಜಮೀನು ವಿವಾದ, ಯೋಧನ ಕುಟುಂಬಕ್ಕೆ ಬಹಿಷ್ಕಾರ

By Kannadaprabha NewsFirst Published Jun 17, 2021, 2:17 PM IST
Highlights

* ಯೋಧನ ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ 
* ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ ಎಂಬುದು ಗ್ರಾಮಸ್ಥರ ವಾದ 
* ಬೆಳಗಾವಿ ತಾಲೂಕಿನ ಗೌಂಡವಾಡದ ಗ್ರಾಮದಲ್ಲಿ ನಡೆದ ಘಟನೆ
 

ಬೆಳಗಾವಿ(ಜೂ.17):  ಜಮೀನು ವಿವಾದ ಸಂಬಂಧ ಗ್ರಾಮಸ್ಥರು ತಮ್ಮ ಕುಟುಂಬಕ್ಕೆ ಹಾಕಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಗೌಂಡವಾಡದ ರೊಬ್ಬರು ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ದೂರು ಸಲ್ಲಿಸಿದ್ದಾರೆ. 

ತಮ್ಮ ಜಮೀನಿಗೆ ಯಾರೂ ಕೆಲಸಕ್ಕೆ ಬರುತ್ತಿಲ್ಲ. ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಯೋಧ ದೀಪಕ ಪಾಟೀಲ ಜಿಲ್ಲಾಧಿಕಾರಿ ಗಮನ ಸೆಳೆದಿದ್ದಾರೆ. 

ಬೆಳಗಾವಿ: ಪೊಲೀಸರ ಮೇಲೆಯೇ ಹಲ್ಲೆ, ಐವರ ವಿರುದ್ಧ ಕೇಸ್‌

ಗ್ರಾಮದ ಗಣಪತಿ, ಕಲ್ಮೇಶ್ವರ, ಕಾಲಭೈರವ ದೇಗುಲಕ್ಕೆ ತಮ್ಮ 5 ಎಕರೆ ಜಮೀನು ಸೇರಿದೆ ಎಂಬುದು ಗ್ರಾಮಸ್ಥರ ವಾದ. ಆದರೆ, ಈ ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ. ಇದೇ ಕಾರಣಕ್ಕೆ ಜೂ.6ರಂದು ಮನೆಗೆ ನುಗ್ಗಿ ಪಿಠೋಪಕರಣ, ಟಿವಿ ಇತರೆ ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ. ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಕಾಕತಿ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ. 
 

click me!