ಸೋಲಿಗೆ ಮೈತ್ರಿ ದೂರೋದು ತಪ್ಪು: ಮೊಯ್ಲಿ, ಮುನಿಯಪ್ಪಗೆ ಟಾಂಗ್‌

By Web DeskFirst Published Jun 25, 2019, 8:09 AM IST
Highlights

ಸೋಲಿಗೆ ಮೈತ್ರಿ ದೂರೋದು ತಪ್ಪು: ಕೃಷ್ಣಬೈರೇಗೌಡ| ಮೊಯ್ಲಿ, ಮುನಿಯಪ್ಪಗೆ ಟಾಂಗ್‌

ಕೋಲಾರ[ಜೂ.25]: ಮೈತ್ರಿಯಿಂದಾಗಿಯೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಯಿತು ಎಂಬ ಪಕ್ಷದ ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ ಹೇಳಿಕೆ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈತ್ರಿ ವಿರುದ್ಧ ಸಿಡಿದ ಮುನಿಯಪ್ಪ!

ಮೈತ್ರಿಯಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಹಾನಿಯಾಗಿಲ್ಲ, ನಷ್ಟವಾಗಿದೆ ಎನ್ನುವುದೆಲ್ಲ ಅವರವರ ವೈಯಕ್ತಿಕ ಕಷ್ಟ-ನಷ್ಟ. ಇದಕ್ಕೆ ಮೈತ್ರಿಯನ್ನು ದೂರುವುದು ತಪ್ಪು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸ್ವತಃ ಸೋಲು ಅನುಭವಿಸಿರುವ ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ.

ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಮೈತ್ರಿ ಸರಕಾರ: ಮಾಜಿ ಸಿಎಂ

ಕಾಂಗ್ರೆಸ್‌ ಹಿರಿಯ ಮುಖಂಡರ ಹೇಳಿಕೆ ಕುರಿತು ಸೋಮವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಸೋಲಾಗಿದೆ. ದೇಶಕ್ಕೆ ಬಿಜೆಪಿ ಸುಳ್ಳು ಮಾಹಿತಿ ನೀಡಿದ್ದರಿಂದ ನಮಗೆ ಸೋಲಾಗಿದೆ. ಇದಕ್ಕಾಗಿ ಮೈತ್ರಿಯನ್ನು ದೂರುವುದು ಸರಿಯಲ್ಲ. ಅದರ ಬದಲು ಆತ್ಮಾವಲೋಕನ ಮಾಡಿಕೊಂಡು ಪಕ್ಷ ಕಟ್ಟುವ ಕಡೆ ಗಮನ ಕೊಡಬೇಕು ಎಂದರು.

click me!