ಲಾಕ್‌ಡೌನ್‌ ನಿಯಮಕ್ಕಿಲ್ಲ ಕಿಮ್ಮತ್ತು: ಸಾಮಾಜಿಕ ಅಂತರ ಮರೆತು ಬಿಜೆಪಿ ನಾಯಕನಿಗೆ ಪುಷ್ಟಮಳೆ

Suvarna News   | Asianet News
Published : May 18, 2020, 12:30 PM IST
ಲಾಕ್‌ಡೌನ್‌ ನಿಯಮಕ್ಕಿಲ್ಲ ಕಿಮ್ಮತ್ತು: ಸಾಮಾಜಿಕ ಅಂತರ ಮರೆತು ಬಿಜೆಪಿ ನಾಯಕನಿಗೆ ಪುಷ್ಟಮಳೆ

ಸಾರಾಂಶ

ಬಿಜೆಪಿ ಕಾರ್ಯಕರ್ತರ ಹಾರ ತುರಾಯಿ, ಹುವಿನೆ ಮಳೆ ಸಂಭ್ರಮಕ್ಕಿಲ್ಲ ಲಾಕ್‌ಡೌನ್ ಅಡ್ಡಿ| ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲಿ ನಡೆದ ಘಟನೆ| ದಿನಸಿ ಕಿಟ್ ಹಂಚುವ ವೇಳೆ‌ ಸ್ಟೇಜ್ ಮೇಲೆ ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್‌ಗೆ ಸ್ಥಳೀಯ ನಾಯಕರಿಂದ ಪುಷ್ಪಮಳೆ| ಸಮಾರಂಭದಲ್ಲಿ ಸಾಮಾಜಿಕ ಅಂತರ ಮರೆತ ಕಾರ್ಯಕರ್ತರು|

ಬೆಂಗಳೂರು(ಮೇ.18): ಮಾರಕ ಕೊರೋನಾ ವೈರಸ್‌ಅನ್ನು ಹೊಡೆದೋಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ, ರಾಜಕೀಯ ಸಭೆ ನಡೆಸದಂತೆ  ಸರ್ಕಾರ ಆದೇಶಿಸಿದೆ. 

ಆದರೆ, ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್ ಅವರ ಬೆಂಬಲಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಭೆ ಸಮಾರಂಭ ಮಾಡಿದ ಘಟನೆ ನಿನ್ನೆ(ಭಾನುವಾರ) ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಬಿಜೆಪಿ ನಾಯಕರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. 

ಇನ್ನು ಅಂತರ್‌ ಜಿಲ್ಲಾ ಪ್ರಯಾಣಕ್ಕೆ ಅಗತ್ಯವಿಲ್ಲ ಪಾಸ್?

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಜನರಿಗೆ ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್ ಅವರು ದಿನಸಿ ಕಿಟ್ ಹಂಚಿದ್ದಾರೆ. ಈ ವೇಳೆ‌ ವೇದಿಕೆ ಮೇಲೆ ಬಿಜೆಪಿ ಮುಖಂಡ ಸುರೇಶ್ ಅವರಿಗೆ ಸ್ಥಳೀಯ ನಾಯಕರಿಗೆ ಪುಷ್ಪಮಳೆ ಸುರಿದಿದ್ದಾರೆ. ಈ ಸಂದರ್ಭದಲ್ಲಿ ಯಾರೂ ಕೂಡ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿಲ್ಲ ಜೊತೆಗೆ ಮಾಸ್ಕ್‌ ಕೂಡ ಧರಿಸಿಲ್ಲ. 

ಶೆಟ್ಟಿಹಳ್ಳಿ ಸುರೇಶ್‌ ಅವರಿಗೆ ಬೆಂಬಲಿಗರು ಹಾರ ತುರಾಯಿ, ಹೂವಿನ ಮಳೆ ಸುರಿಮಳೆಗೈದು ಸಂಭ್ರಮಪಟ್ಟಿದ್ದಾರೆ. ತಿಳಿದವರೆ ಹೀಗೆ ಮಾಡಿದ್ರೆ ಉಳಿದವರ ಕತೆ ಏನು ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ. ಸಮಾರಂಭದಲ್ಲಿ ದಾಸರಹಳ್ಳಿಯ ಜನರಲ್ ಸೆಕ್ರೆಟರಿ ವಿನೋದ್, ಶೆಟ್ಟಿಹಳ್ಳಿ ಬಿಜೆಪಿ ಮುಖಂಡ ಸುರೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!