ಮತ ಗಳಿಕೆಗಾಗಿ ಹಿಂದೂ ಧರ್ಮ ಅವಮಾನಿಸಿದರೆ ಬಿಜೆಪಿ ಧಿಕ್ಕರಿಸಿ: ಸಿ.ಟಿ. ರವಿ

Published : Dec 28, 2022, 06:35 AM ISTUpdated : Dec 28, 2022, 08:18 AM IST
ಮತ ಗಳಿಕೆಗಾಗಿ ಹಿಂದೂ ಧರ್ಮ ಅವಮಾನಿಸಿದರೆ ಬಿಜೆಪಿ ಧಿಕ್ಕರಿಸಿ: ಸಿ.ಟಿ. ರವಿ

ಸಾರಾಂಶ

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಜ್ಞಾ ಪ್ರವಾಹ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿಪ್ಪು ನಿಜಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ 

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಡಿ.28):  ಮೈಸೂರಿನ ರಂಗಾಯಣ ಹಲವು ವರ್ಷ ಎಡ ಪಂಥಿಗಳ ಹಿಡಿತದಲ್ಲಿ ಸಿಲುಕಿ ಸಮಾಜದಿಂದ ದೂರ ಉಳದಿತ್ತು ಈಗ ಅದರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ರಂಗಾಯಣ ನಮ್ಮ ಸಂಸ್ಕೃತಿಗಳನ್ನು ಬಿಂಬಿಸಬೇಕು. ಹಿಂದೂ ಸಂಸ್ಕೃತಿ ಬಗ್ಗೆ ಅವಮಾನ, ಅನ್ಯಾಯವಾದಾಗ ಧ್ವನಿ ಎತ್ತಬೇಕು ಹಿಂದೂಗಳನ್ನು ಬೈದವನಿಗೆ ನಾಲ್ಕು ಜನ ಗನ ಮ್ಯಾನಗಳನ್ನು ನೀಡುತ್ತಾರೆ ಹಿಂದೂ ಕಾರ್ಯಕರ್ತರಿಗೆ ಭದ್ರತೆ ನೀಡುತ್ತಿಲ್ಲ ಹಿಂದೂ ಆಚರಣೆಗಳನ್ನು ಗೌರವಿಸಬೇಕು. ನನಗೆ ಜ್ಞಾನ ಪೀಠದ ಬಗ್ಗೆ ಗೌರವ ಕಡಿಮೆ ಏಕೆಂದರೆ ಗಿರೀಶ್‌ ಕಾರ್ನಾಡ್‌ ಅವರು ಡುಬ್ಲಿಕೇಟ್ ಸಾಹಿತಿ.  ಕೀರ್ತಿನಾಥ ಕುರ್ತಕೋಟಿ ಬರೆದ ಹಾಡುಗಳನ್ನು ಕಾರ್ನಾಡ್ ಬರೆಯುತ್ತಿದ್ದರು ಕೃತಿ ಚೌರ್ಯ ಮಾಡುವುದರಲ್ಲಿ ಕಾರ್ನಾಡ್ ಎತ್ತಿದ ಕೈ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಗಿರೀಶ್ ಕಾರ್ನಡ್‌ ಅವರನ್ನ ಹಿಗ್ಗಾ ಮುಗ್ಗಾ ಜಾಡಿಸಿದರು.

ಮಂಗಳವಾರ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಜ್ಞಾ ಪ್ರವಾಹ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿಪ್ಪು ನಿಜಕನಸುಗಳು ಎಂಬ ಪುಸ್ತಕವನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಬಿಡುಗಡೆ ಮಾಡಿದರು.

ಕೋವಿಡ್ ಭೀತಿ ಹಿನ್ನೆಲೆ; ಮಾಸ್ಕ್ ಧಾರಣಾ ಅಭಿಯಾನ, ಜನಜಾಗೃತಿ ಆರಂಭಿಸಲು ಕ್ರಮ: ಗುರುದತ್ತ ಹೆಗಡೆ

ಬಳಿಕ ಮಾತನಾಡಿದ ಅವರು, ತಮ್ಮ ಕನಸುಗಳನ್ನು ಟಿಪ್ಪು ಕಂಡ ಕನಸುಗಳು ಎಂದು ಸುಳ್ಳು ನಾಟಕ ಬರೆದರು ಸತ್ಯವನ್ನು ಹೇಳಿದರೆ ಕೆಲವರಿಗೆ ಉರಿಯುತ್ತದೆ. ಇದೇ ವೇದಿಕೆ ಪಡೆಯಲು ಹಿಂಜರೆದರು ಬಗವದ್ಗಿತೆ ಅವರಿಗೆ ಹರಾಮ್ ಆದರೆ ಖುರಾನ್ ನಮಗೆ ಹರಾಮ್ ಆಗಬಾರದು ಮತ ಗಳಿಕೆಗಾಗಿ ಹಿಂದೂ ಧರ್ಮವನ್ನು ಅವಮಾನಿಸಿದರೆ ಬಿಜೆಪಿಯನ್ನು ದಿಕ್ಕರಿಸಬೇಕು. ಹಿಂದೂ ಧರ್ಮ ನನ್ನ‌ ತಾಯಿ, ತಾಯಿ‌ ಬಗ್ಗೆ‌ ಹೇಳಿಕೊಂಡರೆ ಏನು ತಪ್ಪು. ಅತ್ಯಾಚಾರಕ್ಕೆ‌ ಹೆದರಿ ಎಷ್ಡೋ ಜನ ಆತ್ಮಹತ್ಯೆ ಮಾಡಿಕೊಂಡರು ಕೊಡಗಿನಲ್ಲಿ ಅಡ್ಡಂಡ ಅಂದ್ರೆ ಬೇರೆನೆ ಇದೆ ಮುಸ್ಲಿಂ ಜಾತಿಗೆ ತುಂಬಾ ಜನರನ್ನ ಮತಾಂತರ ಮಾಡಿದ್ದಾನೆ ಅಂತ ತಿಳಿಸಿದ್ದಾರೆ. 

ನಾಲ್ಕು ವರ್ಗದ ಮೊಗಲ್, ಪಠಾಣ ಎಂದು ಕರೆಯಲಾಗುತ್ತದೆ ಮೇಲೂ ಕೋಟಿಯಲ್ಲಿ ಬ್ರಾಹ್ಮಣರು ಇಂದಿಗೂ ದಿಪಾವಳಿ ಆಚರಿಸುದಿಲ್ಲ. ಈ ಸತ್ಯಗಳು ಬಾಯಿ ತೆರೆದು ನಿಂತಿದೆ, ಟಿಪ್ಪು ಸುಲ್ತಾನ ದಾಳಿಗೆ ಒಳಪಟ್ಟಿ ಬಂಗ್ ವಾಗಿವೆ ಟಿಪ್ಪು ಕೊಡಗಿನಲ್ಲಿ ನೂರಾರು ಜನರು ಮತಾಂತರ ಮಾಡಿದ್ದಾರೆ. ಅಲ್ಲಿನ ಅನೇಕ ಮುಸ್ಲಿಂರ ಹೆಸರು ಹಿಂದೂ ಹೆಸರುಗಳು ಇವೆ. ಮನೆಯ ನಾಯಿಗಳಿಗೆ ನಾವು ಈಗ ಟಿಪ್ಪು ಎಂದು ಕರೆಯುತ್ತೇವೆ. ಟಿಪ್ಪು ಸುಲ್ತಾನ್ ಬಗ್ಗೆ ಸುಳ್ಳು ಮಾಹಿತಿ ನೀಡಿ ಇತಿಹಾಸ ತಿರುಚಿದರು ಅಂತ ಹೇಳಿದ್ದಾರೆ. 

ಬುದ್ದಿ ಜೀವಿಗಳು ವಾಕ್ ಸ್ವಾತಂತ್ರ್ಯ ಬೇಕು ಎನ್ನುವವರು ನಮಗೆ ವಾಕ್ ಸ್ವಾತಂತ್ರ್ಯ ಇಲ್ಲವೇ ಟಿಪ್ಪು ಸುಲ್ತಾನ್ ನಿಜ ಕನಸುಗಳು ಪುಸ್ತಕದಲ್ಲೂ ಸತ್ಯಗಳು ಇವೆ ಈ ನಾಟಕವನ್ನು ಬಹಳ ಅಧ್ಯಯನ ಮಾಡಿ ನಾಟಕ ಬರೆಯಲಾಗಿದೆ ನಾಟಕ, ಪುಸಕ್ತ ಓದದೇ ಬ್ಯಾನ್ ಮಾಡಿವುದು ಎಷ್ಟು ಸರಿ ಪಾಕಿಸ್ತಾನ್ ಬೇರೆ ಆಗೋದೆ ಇದ್ರೆ ಮುಸ್ಲಿಂರೆ ಪಾಕಿಸ್ತಾನಕ್ಕೆ‌ ಹೋಗಲಿ ಎಂದಿದ್ದು ಅಡ್ಡಂಡ ಕಾರ್ಯಪ್ಪ ಅಲ್ಲ ಅಂಬೇಡ್ಕರ್  ಧರ್ಮದ ಆಧಾರದಲ್ಲಿ ದೇಶವನ್ನ‌ ಒಡೆಯುತ್ತಿದ್ದಾರೆ.
ಲೇಖಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಇನ್ನು ಹಿಂದೂಗಳಿಗೆ ಯಾರಾದರೂ ಅನ್ಯಾಯ ಮಾಡಿದೆ ನಾನು ಸುಮ್ಮನಿರಲ್ಲ ಎಂದು ಬಾಷಣೂದ್ದಕ್ಕೂ ಗೀರೀಶ್ ಕಾರ್ನಡ್ ವಿರುದ್ಧ ಕಿಡಿಕಾರಿದರು. 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ