ಬಿಜೆಪಿ ಶಾಸಕರೋರ್ವರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಜನ್ಮ ದಿನ ಆಚರಣೆ ವೇಳೆ ಎಲ್ಲವನ್ನು ಮರೆತು ಎಂಜಾಯ್ ಮಾಡಿದ್ದಾರೆ.
ಧಾರವಾಡ (ನ.17): ಶಾಸಕರಿಂದಲೇ ಕೊರೊನಾ ರೂಲ್ಸ್ ಬ್ರೆಕ್ ಆಗಿದ್ದು, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿಂದ ಅದ್ದೂರಿಯಾಗಿ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ.
ತಮ್ಮ ಹುಟ್ಟಿದ ಹಬ್ಬವನ್ನ ತಮ್ಮ ನಿವಾಸದಲ್ಲಿಯೇ ಆಚರಣೆ ಮಾಡಿಕೊಂಡಿದ್ದಾರೆ. ಈ ವೇಳೆ ಶಾಸಕ ಅಮೃತ ದೇಸಾಯಿ ಮಾಸ್ಕ್ ಹಾಗೂ ಸೋಶಿಯಲ್ ಡಿಸ್ಟೆನ್ಸ್ ಎಲ್ಲವನ್ನೂ ಮರೆತಿದ್ದಾರೆ.
ಬೈ ಎಲೆಕ್ಷನ್: ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ 3 ಹೆಸರು ಶಿಫಾರಸು..! .
ಕೊರೋನಾ ಸಂದರ್ಭದಲ್ಲಿಯೂ ಶಾಸಕ ಅಮೃತ ದೇಸಾಯಿ ಈ ರೀತಿ ನಡೆದುಕೊಂಡಿದ್ದು, ಜನರಿಗೊಂದು ನ್ಯಾಯ, ಶಾಸಕರಿಗೊಂದು ನ್ಯಾಯವೇ ಎನ್ನುವ ಪ್ರಶ್ನೆ ಮೂಡಿದೆ.
ಜನರು ಇದೆ ತಪ್ಪು ಮಾಡಿದರೆ ಅವರಿಗೆ ಪೈನ್ ಹಾಕುತ್ತಾರೆ. ಆದರೆ ಜನಪ್ರತಿನಿಧಿಗಳು ತಪ್ಪು ಮಾಡಿದರೆ ಕೆಳೋರು ಯಾರು ಎಂಬ ಪ್ರಶ್ನೆ ಮೂಡಿದೆ.