ಮಹಿಳೆ ಮೇಲೆ ದರ್ಪ ತೋರಿದ ಪೊಲೀಸ್ ಅಧಿಕಾರಿಗೆ ಗೇಟ್‌ಪಾಸ್!

By Web DeskFirst Published Jan 29, 2019, 3:27 PM IST
Highlights

ದೂರು ನೀಡಲು ಬಂದ ಮಹಿಳೆ ಮೇಲೆ ದೌರ್ಜನ್ಯ; ಮಹಿಳೆಯರು, ಮಕ್ಕಳು ಇದಾವುದನ್ನೂ ಪರಿಗಣಿಸದೇ ಹಲ್ಲೆ; ಅಧಿಕಾರಿ ಅಮಾನತು

ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನ್ಯಾಯ ಕೇಳಿ ಠಾಣೆಗೆ ಬಂದಿದ್ದ ಮಹಿಳೆ ಮೇಲೆ ಕುಮಾರಸ್ವಾಮಿ ಲೇಔಟ್ ಠಾಣೆಯ ಎಎಸ್‌ಐ ರೇಣುಕಯ್ಯ ಮೃಗೀಯವಾಗಿ ವರ್ತಿಸಿದ್ದಾರೆ. ಮಹಿಳೆಯ ಕುತ್ತಿಗೆ ಹಿಡಿದು ಹೊರದಬ್ಬಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ರೇಣುಕಯ್ಯನಿಗೆ ಸೇವೆಯಿಂದ ಅಮಾನತು ಮಾಡಿ, ತನಿಖೆಗೆ ಆದೇಶಿಸಿದ್ದಾರೆ.

"

"

"

click me!