
ಬಸವಕಲ್ಯಾಣ: ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಹಿಂದೂ ಸಮಾವೇಶ ಹಿನ್ನೆಲೆ ಭಾನುವಾರ ನಾರಾಯಣಪುರದ ಭವಾನಿ ದೇಗುಲದ ಹಿಂಭಾಗದ ಜಾಗ ಸ್ವಚ್ಛಗೊಳಿಸುವಾಗ ಶಿವಲಿಂಗ, 5 ಹೆಡೆಯ ನಾಗಸರ್ಪ, ಶಿಲಾಶಾಸನ ಪತ್ತೆಯಾಗಿವೆ.
8 ವರ್ಷಗಳ ಹಿಂದೆಯೂ ಗ್ರಾಮದಲ್ಲಿ ವಿಷ್ಣು, ಕಾಳಿದೇವಿ ವಿಗ್ರಹಗಳು ಪತ್ತೆಯಾಗಿದ್ದವು. ಗ್ರಾಮದಲ್ಲಿ ಸುಮಾರು 108 ದೇವಸ್ಥಾನಗಳು ಇರುವ ಪ್ರತೀತಿ ಇದ್ದು, ಇನ್ನಷ್ಟು ಶಿಲಾಶಾಸನಗಳು ಪತ್ತೆಯಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರದಿಂದ ಉತ್ಖನನ ಮಾಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.