ಬಸವಕಲ್ಯಾಣ: ಪುರಾತನ ಶಿವಲಿಂಗ, 5 ಹೆಡೆ ನಾಗಸರ್ಪ, ಶಿಲಾಶಾಸನ ಪತ್ತೆ

Kannadaprabha News   | Kannada Prabha
Published : Feb 10, 2026, 05:51 AM IST
Shivalinga

ಸಾರಾಂಶ

ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಬಸವಕಲ್ಯಾಣ: ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಹಿಂದೂ ಸಮಾವೇಶ ಹಿನ್ನೆಲೆ ಜಾಗ ಸ್ವಚ್ಛ

ಹಿಂದೂ ಸಮಾವೇಶ ಹಿನ್ನೆಲೆ ಭಾನುವಾರ ನಾರಾಯಣಪುರದ ಭವಾನಿ ದೇಗುಲದ ಹಿಂಭಾಗದ ಜಾಗ ಸ್ವಚ್ಛಗೊಳಿಸುವಾಗ ಶಿವಲಿಂಗ, 5 ಹೆಡೆಯ ನಾಗಸರ್ಪ, ಶಿಲಾಶಾಸನ ಪತ್ತೆಯಾಗಿವೆ.

8 ವರ್ಷಗಳ ಹಿಂದೆಯೂ ಗ್ರಾಮದಲ್ಲಿ ವಿಷ್ಣು, ಕಾಳಿದೇವಿ ವಿಗ್ರಹಗಳು ಪತ್ತೆ

8 ವರ್ಷಗಳ ಹಿಂದೆಯೂ ಗ್ರಾಮದಲ್ಲಿ ವಿಷ್ಣು, ಕಾಳಿದೇವಿ ವಿಗ್ರಹಗಳು ಪತ್ತೆಯಾಗಿದ್ದವು. ಗ್ರಾಮದಲ್ಲಿ ಸುಮಾರು 108 ದೇವಸ್ಥಾನಗಳು ಇರುವ ಪ್ರತೀತಿ ಇದ್ದು, ಇನ್ನಷ್ಟು ಶಿಲಾಶಾಸನಗಳು ಪತ್ತೆಯಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರದಿಂದ ಉತ್ಖನನ ಮಾಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಮಂಡ್ಯದಲ್ಲಿ ARAI ಕೇಂದ್ರ ಸ್ಥಾಪನೆಗೆ ಬಸರಾಳು ಬಳಿ 105 ಎಕರೆ ಭೂಮಿ ಲಭ್ಯ: ಕುಮಾರಸ್ವಾಮಿಗೆ ಪತ್ರ ಬರೆದ ಎಂ.ಬಿ. ಪಾಟೀಲ
Explainer: ಬೆಂಗಳೂರು ಮೆಟ್ರೋ ದೇಶದಲ್ಲೇ 'ಅತ್ಯಂತ ದುಬಾರಿ' ಅನ್ನೋ ಕುಖ್ಯಾತಿ ಗಳಿಸಿದ್ದು ಯಾರಿಂದ?