ಶಾಲೆಯಲ್ಲಿದ್ದ 22 ಸಂತ್ರಸ್ತ ಕುಟುಂಬ ತೆರವುಗೊಳಿಸಿದ ಡಿಸಿ

Published : Sep 25, 2019, 09:18 AM IST
ಶಾಲೆಯಲ್ಲಿದ್ದ 22 ಸಂತ್ರಸ್ತ ಕುಟುಂಬ ತೆರವುಗೊಳಿಸಿದ ಡಿಸಿ

ಸಾರಾಂಶ

ಹುನಗುಂದ ತಾಲೂಕಿನ ಧನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಾಸವಾಗಿದ್ದ 22 ಸಂತ್ರಸ್ತ ಕುಟುಂಬಗಳನ್ನು ತೆರವುಗೊಳಿಸಿದ ಡಿಸಿ| ಶಾಲೆಯಲ್ಲಿ ನೆರೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ| ಸಂತ್ರಸ್ತ ಕುಟುಂಬಗಳನ್ನು ತೆರವುಗೊಳಿಸುವಂತೆ ಶಿಕ್ಷಣ ಸಚಿವ ಸುರೇಶಕುಮಾರ ಹುನಗುಂದ  ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದರು| 

ಹುನಗುಂದ:(ಸೆ.25)  ತಾಲೂಕಿನ ಧನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಾಸವಾಗಿದ್ದ 22 ಸಂತ್ರಸ್ತ ಕುಟುಂಬಗಳನ್ನು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಮಂಗಳವಾರ ತಾವೇ ಮುಂದೆ ನಿಂತು ತೆರವುಗೊಳಿಸಿದ್ದಾರೆ. 


ನೆರೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಸೆ.23 ರಂದು ‘ಸುವರ್ಣ ನ್ಯೂಸ್. ಕಾಂ' ವಿಸ್ತೃತ ವರದಿ  ಪ್ರಕಟಿಸಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅವರು ಸಂತ್ರಸ್ತ ಕುಟುಂಬಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳ ಸುಲಭ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಹುನಗುಂದ  ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ತೆರವುಗೊಳಿಸಲಾಗಿದೆ.

PREV
click me!

Recommended Stories

ಮೈಸೂರು ಅಶೋಕಪುರಂ ರೈಲ್ವೆ ನಿಲ್ದಾಣ ಹೆಸರು ಬದಲಾವಣೆ; ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ
40th State Journalists Conference: ಏ.11, 12ರಂದು ಬೀದರ್‌ಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ