97 ಎಕರೆ ಭೂಮಿ ಕಬಳಿಕೆ ಯತ್ನ, ಪ್ರಭಾವಿ ರಾಜಕಾರಣಿಗಳ ಕೈವಾಡ: ಎಚ್. ಡಿ. ರೇವಣ್ಣ

Published : Jan 24, 2025, 10:37 AM IST
97 ಎಕರೆ ಭೂಮಿ ಕಬಳಿಕೆ ಯತ್ನ, ಪ್ರಭಾವಿ ರಾಜಕಾರಣಿಗಳ ಕೈವಾಡ: ಎಚ್. ಡಿ. ರೇವಣ್ಣ

ಸಾರಾಂಶ

ಸುಮಾರು 500 ಕೋಟಿ ಮೌಲ್ಯದ ಜಮೀನು ದುರ್ಬಳಕೆ ಆಗಿದ್ದು, ಯಾವುದೇ ಮೂಲ ದಾಖಲೆ ಇಲ್ಲದೆ ಯಾರೊಬ್ಬರೂ ಸಾಗುವಳಿಯಲ್ಲಿ ಇಲ್ಲದಿದ್ದರೂ ಕೇವಲಹೆಸರುಗಳನ್ನು ನಮೂದಿಸಿ ತಲಾ ಒಬ್ಬೊಬ್ಬರಿಗೆ 1-2 ಎಕರೆಯಂತೆ ಹಂಚಿಕೆ ಮಾಡಲಾಗಿದೆ: ಮಾಜಿ ಸಚಿವ ಎಚ್.ಡಿ. ರೇವಣ್ಣ 

ಹಾಸನ(ಜ.24): ನಗರದ ವಿವಿಧೆಡೆ ಇರುವ ಸರ್ಕಾರಿ ಜಾಗ ಕಬಳಿಸಲು ದೊಡ್ಡಕೊಂಡಗೊಳಗ್ರಾಮದಬಳಿ ಅಧಿಕಾರಿಗಳೇಕ್ಷೆ ಬರಹದ ಪಹಣಿ ಸೃಷ್ಟಿಸಿ ಕೋಟ್ಯಂತರ ರುಪಾಯಿ ಬೆಲೆಬಾಳುವ 97 ಎಕರೆ ಭೂಮಿ ಕಬಳಿಸಲು ಹುನ್ನಾರ ನಡೆದಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ನಗರ ಪ್ರದೇಶದ ಸರ್ಕಾರಿ ಜಾಗವನ್ನು ಕಂದಾಯ ಅಧಿಕಾರಿಗಳು ಹಾಗೂ ಕೆಲ ಪ್ರಭಾವಿಗಳುಸೇರಿದಾಖಲೆತಿದ್ದಿದ್ದಾರೆ. ದೊಡ್ಡಕೊಂಡಗೊಳ ಗ್ರಾಮದ 7,32,34,54ರಲ್ಲಿನ ಸರ್ವೆ ನಂಬರ್‌ನಲ್ಲಿ 97 ಎಕರೆ ಭೂಮಿ ಅಕ್ರಮ ಪರಭಾರೆ ಮಾಡಲಾಗಿದ್ದು, ಮಂಜೂರಾತಿ ದಾಖಲೆಗಳೆ ಇಲ್ಲದೆ ಕೆಲವರ ಹೆಸರಿಗೆ ಮಂಜೂರು ಮಾಡಿ ಕೈ ಬರಹದ ಪಹಣಿ ಸೃಷ್ಟಿಸಿ ಹಗರಣ ಮಾಡಲಾಗಿದೆ ಎಂದು ಆರೋಪವಿದೆ. 

ಪ್ರಜ್ವಲ್ ರೇವಣ್ಣಗೆ ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ!

ಸುಮಾರು 500 ಕೋಟಿ ಮೌಲ್ಯದ ಜಮೀನು ದುರ್ಬಳಕೆ ಆಗಿದ್ದು, ಯಾವುದೇ ಮೂಲ ದಾಖಲೆ ಇಲ್ಲದೆ ಯಾರೊಬ್ಬರೂ ಸಾಗುವಳಿಯಲ್ಲಿ ಇಲ್ಲದಿದ್ದರೂ ಕೇವಲಹೆಸರುಗಳನ್ನು ನಮೂದಿಸಿ ತಲಾ ಒಬ್ಬೊಬ್ಬರಿಗೆ 1-2 ಎಕರೆಯಂತೆ ಹಂಚಿಕೆ ಮಾಡಲಾಗಿದೆ.ತಾಲೂಕು ಕಚೇರಿಯಲ್ಲಿ ಪ್ರಸ್ತುತ ಪ್ರಥಮದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹಾಗೂ ಈ ಹಿಂದೆ ರೆಕಾರ್ಡ್ ರೂಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚನ್ನಕೇಶವ ಮತ್ತು ಗ್ರಾಮಲೆಕ್ಕಿಗ ವಿಶ್ವನಾಥ್ ಇಬ್ಬರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಡತಗಳ ಒಳಗೆ ಸೇರಿಸಿದ್ದಾರೆ ಎಂದು ದೂರಿದರು. ಗೋಮಾಳ ಜಮೀನಿನಲ್ಲಿ ಬಡಾವಣೆ ಮಾಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಕೆಲ ಪ್ರಭಾವಿ ರಾಜಕಾರಣಿಗಳು ಹಾಗು ಭೂ ಮಾಫಿಯಾದವರು ಸೇರಿ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ನಕಲಿ ದಾಖಲೆ ಸೃಷ್ಟಿ ಮಾಡಿದವರ ವಿರುದ್ದ ಡಿಸಿ ಕ್ರಮ ಕೈಗೊಂಡು ಈ 97 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಆಗ್ರಹಿಸಿದರು. ಹಾಸನ ಡಿಸಿ ಅವರು ಕೆಲಸ ಮಾಡೋದ್ರಲ್ಲಿ ನಂಬರ್‌ ಒನ್ ಎಂಥದ್ದೂ ಬೇಕಾದ್ರು ಸೃಷ್ಟಿಸಬಹುದು. ಮುಚ್ಚಿ ಹಾಕಬಹುದು ಎಂದು ಅವಾರ್ಡ್ ಕೊಟ್ಟಿದ್ದಾರೆ. ಈ ಗೋಮಾಳ ಭೂಮಿ ಅಕ್ರಮ ಮಂಜುರಾತಿ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲಿ. ಈ ಬಗ್ಗೆ ಸದನದಲ್ಲಿ ಕೂಡ ಮಾತನಾಡಿದ್ದೇವೆ. ಸಾಗುವಳಿ ಚೀಟಿ ಇದ್ದರೆ, ಮಂಜೂರಾತಿ ದಾಖಲೆ ಇದ್ದರೆ ಭೂಮಿ ಕೊಡಲಿ. ಆದರೆ ಈ ಯಾವುದೇ ದಾಖಲೆಪತ್ರ ಇಲ್ಲದೆಭೂಮಿಪರಭಾರೆಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಧಿಕಾರಿಗಳೇ ಕೈ ಪಹಣಿ ರಚಿಸಿ ತಮಗೆ ಇಷ್ಟ ಬಂದವರ ಹೆಸರುಗಳನ್ನು ಬರೆದುಕೊಂಡು ದುರಸ್ತಿ ಆಗದಿದ್ದರೂ ಲೇಔಟ್ ಮಾಡಲು ಅನುಮತಿ ನೀಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಕೋಟ್ಯಂತರರು. ಬೆಲೆಬಾಳುವ ರೈತರ ಜಮೀನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ರಕ್ಷಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವಂತೆ ಆಗ್ರಹಿಸುತ್ತೇನೆ. ಜೊತೆಗೆ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

ನಗರದ ಹೊರವಲಯದಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಮೂಲ ಕಡತದ ಮಾದರಿಯಲ್ಲೇ ನಡೆಯಬೇಕು, ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ವಿಶಾಲವಾದ ವಿಮಾನ ನಿಲ್ದಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಬಿಗ್ ರಿಲೀಫ್, ಆರೋಪ ನಿಗದಿಗೆ ತಡೆ

ಪ್ರವಾಸಿ ಸ್ಥಳಗಳನ್ನು ಹೊಂದಿರುವ ಹಾಸನ ಜಿಲ್ಲೆಗೆ ವಿದೇಶದ ನಂಟುಹಾಗೂ ಹೊರರಾಜ್ಯಗಳಿಗೆ ತೆರಳಲುಹಾಗೂ ಹಾಸನದಲ್ಲಿ ಬೆಳೆದ ಬೆಳೆಗಳನ್ನು ಹೊರರಾಜ್ಯ ಹಾಗೂ ದೇಶಕ್ಕೆ ರಫ್ತು ಮಾಡಲು ವಿಶಾಲವಾದ ವಿಮಾನ ನಿಲ್ದಾಣ ಅಗತ್ಯ ಎಂದು ಅಭಿಪ್ರಾಯಪಟ್ಟರು. 

ಕೃಷಿ ಕಾಲೇಜು ಬೇಕಾದರೇ ಮಂಡ್ಯದವರು ಮಾಡಿಕೊಳ್ಳಲಿ. ಈಲ್ಲೆಯ ಬೆಳವಣಿಗೆಗೆ ಬೇಕಾದರೇ ಅವರಿಗೂ 500 ಕೋಟಿ ಕೊಡಲಿ. ಏಳು ಜನ ಶಾಸಕರ ಗೆಲ್ಲಿಸಿ ಕೊಟ್ಟಿದ್ದು, ಅವರ ಋಣ ತೀರಿಸಲಿ. ನಮ್ಮದು ಏನಿದೆ ಬೆಂಗಳೂರಿಗೆ ಕೃಷಿ ಕಾಲೇಜು ಇರಬೇಕು. ನಮ್ಮ ಕೃಷಿ ಕಾಲೇಜು ಅಭಿವೃದ್ಧಿ ಮಾಡಲು ಮುಂದಾಗುತ್ತೇವೆ. ಯಾವ ಕಾರಣಕ್ಕೂ ಮಂಡ್ಯಕ್ಕೆ ಸೇರಿಸುವುದು ಬೇಡ. ಹಿಂದಿನಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ ನಡೆಯಲಿ. ಇಲ್ಲವಾದರೆ ನಮಗೂ ಒಂದು ಯೂನಿವರ್ಸಿಟಿ ಕೃಷಿ ಕಾಲೇಜು ಮಾಡಿಕೊಡಲಿ ಎಂದು ತಾಕೀತು ಮಾಡಿದರು. ಅಸೆಂಬ್ಲಿಯಲ್ಲಿ ಈ ಬಗ್ಗೆ ಹೋರಾಟ ಮಾಡಲಾಗುವುದು ಎಂದರು.

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ