ಕಲಬುರಗಿ: ಚಿಕಿತ್ಸೆ ಫಲಿಸದೆ ಆಶಾ ಕಾರ್ಯಕರ್ತೆ ಸಾವು

Kannadaprabha News   | Asianet News
Published : May 16, 2020, 02:50 PM IST
ಕಲಬುರಗಿ: ಚಿಕಿತ್ಸೆ ಫಲಿಸದೆ ಆಶಾ ಕಾರ್ಯಕರ್ತೆ ಸಾವು

ಸಾರಾಂಶ

ರಸ್ತೆ ಅಪಘಾತ ಆಶಾ ಕಾರ್ಯಕರ್ತೆ ಸಾವು| ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್‌ ಬಳಿ ನಡೆದ ದುರ್ಘಟನೆ| ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು, ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಆಶಾ ಕಾರ್ಯಕರ್ತೆ ಕೊನೆಯುಸಿರು|

ಕಲಬುರಗಿ(ಮೇ.16): ಜಿಲ್ಲೆಯ ಜೇವರ್ಗಿ ತಾಲೂಕು ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದಾಗ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಯಡ್ರಾಮಿ ತಾಲೂಕಿನ ಆಶಾ ಕಾರ್ಯಕರ್ತೆ ಶಾರದಾ ನಿಂಗಪ್ಪ ಕೋಟನೂರ (45) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ಈ ಕುರಿತಂತೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಮಾಗಣಗೇರಾದಿಂದ ಶುಕ್ರವಾರ ಬೆಳಗ್ಗೆ ಹೊರಟು ಜೇವರ್ಗಿಯತ್ತ ಸಾಗುತ್ತಿದ್ದಾಗ ಚಿಗರಳ್ಳಿ ಕ್ರಾಸ್‌ ಬಳಿ ಇವರ ಬೈಕ್‌ ಅಪಘಾತಕ್ಕೀಡಾಗಿತ್ತು.

ಕೊರೋನಾ ಕಾಟಕ್ಕೆ ಸುಸ್ತಾದ ಜನ: ನಾನ್‌ ಕೋವಿಡ್‌ ರೋಗಿಗಳ ಸಮಸ್ಯೆ ಕೇಳೋರ‍್ಯಾರು..?

ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಇಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಆಶಾ ಕಾರ್ಯಕರ್ತೆ ಕೊನೆಯುಸಿರೆಳೆದಿದ್ದಾಳೆ.
 

PREV
click me!

Recommended Stories

ಮೇಟಿ ಪುತ್ರ ಉಮೇಶ್‌ಗೆ ಟಿಕೆಟ್: ಗೆಲುವು ಖಚಿತ ಎಂದ ಸಚಿವ ಸತೀಶ್‌ ಜಾರಕಿಹೊಳಿ
ಸಚಿವ ಶಿವರಾಜ್ ತಂಗಡಗಿಗೆ ಎದೆನೋವು: ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲು