ರಾಮನಗರ: ರೈಲು ಹೊಡೆತಕ್ಕೆ ಕುರಿಗಳ ಮಾರಣ ಹೋಮ

Published : Dec 23, 2018, 07:19 PM IST
ರಾಮನಗರ: ರೈಲು ಹೊಡೆತಕ್ಕೆ  ಕುರಿಗಳ ಮಾರಣ ಹೋಮ

ಸಾರಾಂಶ

ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ದಾರುಣ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರ, [ಡಿ. 23]: ಚಲಿಸುತ್ತಿದ್ದ ರೈಲಿಗೆ ಸಿಲುಕಿ 18 ಕುರಿಗಳು ದುರ್ಮರಣ ಹೊಂದಿರುವ ಘಟನೆ  ಇಂದು [ಭಾನುವಾರ] ಚನ್ನಪಟ್ಟಣದ ಮುದಗೆರೆ ಸಮೀಪ ನಡೆದಿದೆ.

ಕುರಿಗಳು ಮುದಗೆರೆಯ ದೇಸಿಗೌಡ ಎಂಬವರಿಗೆ ಸೇರಿವೆ. ಕುರಿಗಳು ಹಳಿ ದಾಟುತ್ತಿದ್ದ ವೇಳೆ ದಿಡೀರ್ ಆಗಿ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿವೆ.

ರೈಲಿನ ರಭಸದ ಹೊಡೆತಕ್ಕೆ ಕುರಿಗಳ ದೇಹದ ಭಾಗಗಳು ಛಿದ್ರ-ಛಿದ್ರವಾಗಿ ಎಲ್ಲೊಂದರಲ್ಲಿ ಬಿದ್ದಿವೆ.ಕುರಿಗಳ ಮಾರಣಹೋಮದಿಂದ ಲಕ್ಷಾಂತರ ರು. ನಷ್ಟವಾಗಿದ್ದು,  ಮಾಲೀಕ ಮುದಗೆರೆಯ ದೇಸಿಗೌಡಗೆ ದಿಕ್ಕು ತೋಚದಂತಾಗಿದೆ. 

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ