ಫೆ.13ಕ್ಕೆ ಕರ್ನಾಟಕ ಬಂದ್ : ವಿವಿಧ ಸಂಘಟನೆಗಳ ಬೆಂಬಲ

Kannadaprabha News   | Asianet News
Published : Feb 08, 2020, 08:16 AM IST
ಫೆ.13ಕ್ಕೆ ಕರ್ನಾಟಕ ಬಂದ್   : ವಿವಿಧ ಸಂಘಟನೆಗಳ ಬೆಂಬಲ

ಸಾರಾಂಶ

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಕರೆಯಲಾಗಿರುವ ಬಂದ್‌ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು ಇದೀಗ ಅಂಬೇಡ್ಕರ್ ಸೇನೆಯೂ ಕೂಡ ತನ್ನ ಬೆಂಬಲ ನೀಡುವುದಾಗಿ ಹೇಳಿದೆ. 

ಬೆಂಗಳೂರು [ಫೆ.08] : ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಫೆ.13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಅಂಬೇಡ್ಕರ್‌ ಸೇನೆ ಬೆಂಬಲ ಸೂಚಿಸಿದೆ. 

 ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ರಾಜ್ಯದಲ್ಲಿ ಅನೇಕರು ಉದ್ಯೋಗವಿಲ್ಲದೆ ನಿರುದ್ಯೋಗ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ನಾಗೇಶ್‌ ನೇತೃತ್ವದಲ್ಲಿ ನಗರದ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಧರಣಿಗೆ ಫೆ.13ಕ್ಕೆ 100ನೇ ದಿನ ಪೂರೈಸಲಿದೆ. ಆದರೂ ಸಹ ಇಲ್ಲಿಯವರೆಗೆ ರಾಜ್ಯ ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

PREV
click me!

Recommended Stories

ಲಕ್ಕುಂಡಿ ರಹಸ್ಯ: ನೆಲದಾಳದ ನಿಧಿಗೆ ಸರ್ಪಗಾವಲು! ಸರ್ಪ ಕಂಡು ಬೆಚ್ಚಿ ಬಿದ್ದ ಮಂದಿ!
ಲಕ್ಕುಂಡಿ ಉತ್ಖನನದಲ್ಲಿ ಮಡಿಕೆಗಳು ಪತ್ತೆ; ಮಣ್ಣಿನ ಮಡಿಕೆಯೊಳಗೆ ಅಡಗಿದೆಯೇ ಬಂಗಾರದ ನಗ-ನಾಣ್ಯ?