ಧಾರವಾಡ:ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಜೀವಂತವಾಗಿ ದಹನವಾದ ಮೂಕ ಪ್ರಾಣಿಗಳು

By Suvarna NewsFirst Published Dec 21, 2019, 9:59 AM IST
Highlights

ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ| ಸುಟ್ಟು ಕರಕಲಾದ ಎರಡು ಎತ್ತು, ಒಂದು ಆಕಳು| ತಾಲೂಕಿನ ಕಮಲಾಪುರದಲ್ಲಿ ನಡೆದ ಘಟನೆ| ಸಯ್ಯದ್ ಶೇಕ್ ಸನದಿ ಎಂಬುವವರಿಗೆ ಸೇರಿದ ಜಾನುವಾರುಗಳು| 

ಧಾರವಾಡ(ಡಿ.21): ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ ತಗುಲಿದ ಪರಿಣಾಮ ಎರಡು ಎತ್ತು, ಒಂದು ಆಕಳು ಜೀವಂತವಾಗಿ ದಹನವಾದ ಘಟನೆ ತಾಲೂಕಿನ ಕಮಲಾಪುರದಲ್ಲಿ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. 

ಸಯ್ಯದ್ ಶೇಕ್ ಸನದಿ ಎಂಬುವವರಿಗೆ ಸೇರಿದ ಜಾನುವಾರುಗಳಾಗಿವೆ. ನಿನ್ನೆ ತಡರಾತ್ರಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಮೂಕ ಪ್ರಾಣಿಗಳು ಸುಟ್ಟು ಕರಕಲಾಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದನದ ಕೊಟ್ಟಿಗೆಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಮಾತ್ರ ನಿಗೂಢವಾಗಿಯೇ ಇದೆ. ಮೂಕ ಪ್ರಾಣಿಗಳನ್ನ ಕಳೆದುಕೊಂಡ ಮಾಲೀಕ ಸಯ್ಯದ್ ಶೇಕ್ ಸನದಿ ಚಿಂತಾಕ್ರಾಂತರಾಗಿದ್ದಾರೆ. ಎರಡು ಎತ್ತು, ಒಂದು ಆಕಳು ಸಾವನ್ನಪ್ಪಿದ್ದರಿಂದ ರೈತನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!