ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

Kannadaprabha News   | Asianet News
Published : Dec 26, 2019, 09:50 AM IST
ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

ಸಾರಾಂಶ

ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ಘಟನೆ ನಡೆದಿದೆ. ತುಟಿಯನ್ನೇ ಹಾವು ಕಚ್ಚಿ ಹರಿದಿದೆ. 

ಶಿವಮೊಗ್ಗ (ಡಿ.26): ವ್ಯಕ್ತಿಯೊಬ್ಬ ನಾಗರ ಹಾವಿಗೆ ಮುತ್ತು ಕೊಡಲು ಹೋಗಿ ಅದರಿಂದ ಕಚ್ಚಿಸಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭದ್ರಾವತಿಯ ಸೋನು ಎಂಬಾತ ಹಾವಿನಿಂದ ಕಚ್ಚಿಸಿಕೊಂಡು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯಾಗಿದ್ದಾನೆ. 

ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ಈ ವೇಳೆ ಸ್ಥಳೀಯರು ಸೋನು ಎಂಬಾತನನ್ನು ಹಾವು ಹಿಡಿಯಲು ಕರೆಯಿಸಿದ್ದರು.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು...

ಪಾನಮತ್ತನಾಗಿ ಆಗಮಿಸಿದ ಸೋನು ಹಾವನ್ನು ಕೈಯಲ್ಲಿ ಹಿಡಿದ ಬಳಿಕ ಹಾವಿನ ಹೆಡೆಗೆ ಮುತ್ತು ನೀಡಲು ಹೋಗಿದ್ದಾನೆ. ಈ ವೇಳೆ ಹಾವು ಸೋನುವಿನ ತುಟಿಗೆ ಕಚ್ಚಿದೆ. ಆ ಬಳಿಕ ಸ್ಥಳೀಯರು ಸೋನುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

PREV
click me!

Recommended Stories

ದರ್ಶನ್‌ಗೆ ಮತ್ತೆ ಸಿಗುತ್ತಾ ರಿಲೀಫ್? ಜಾಮೀನಿಗೆ ಅರ್ಜಿ ಸಲ್ಲಿಸ್ತಿರೋದು ಇದು ಎಷ್ಟನೇ ಬಾರಿ
ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ, ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ಡ್ಯೂಟಿ-ಫ್ರೀ, ಪ್ರೀ-ಬುಕಿಂಗ್!