ಶಿಶಿಲೇಶ್ವರ ಮತ್ಸ್ಯ ತೀರ್ಥ ಕ್ಷೇತ್ರಕ್ಕೇ ಮೀನು ಹಿಡಯಲು ಬಂದ್ರು..!

Kannadaprabha News   | Asianet News
Published : Jun 24, 2020, 07:13 AM IST
ಶಿಶಿಲೇಶ್ವರ ಮತ್ಸ್ಯ ತೀರ್ಥ ಕ್ಷೇತ್ರಕ್ಕೇ ಮೀನು ಹಿಡಯಲು ಬಂದ್ರು..!

ಸಾರಾಂಶ

ಬ್ರಿಟಿ​ಷರ ಕಾಲ​ದಿಂದ​ಲೇ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಾಲಯದ ಮತ್ಸ್ಯ ತೀರ್ಥ ಕ್ಷೇತ್ರದಲ್ಲಿನ ಮೀನುಗಳನ್ನು ಹಿಡಿಯಲು ಯತ್ನಿಸಿದ ಏಳು ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಉಪ್ಪಿನಂಗಡಿ(ಜೂ.24): ಬ್ರಿಟಿ​ಷರ ಕಾಲ​ದಿಂದ​ಲೇ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಾಲಯದ ಮತ್ಸ್ಯ ತೀರ್ಥ ಕ್ಷೇತ್ರದಲ್ಲಿನ ಮೀನುಗಳನ್ನು ಹಿಡಿಯಲು ಯತ್ನಿಸಿದ ಏಳು ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಪಶ್ಚಿಮ ಘಟ್ಟದಿಂದ ಹರಿದು ಬರುವ ಕಪಿಲಾ ನದಿಯಲ್ಲಿನ ಈ ಮತ್ಸ್ಯತೀರ್ಥ ಬಹು ಬಗೆಯ ಹಾಗೂ ಬೃಹ​ತ್‌ ಗಾತ್ರದ ಮೀನುಗಳಿಂದ ಜನಾಕರ್ಷಣೆಗೆ ಒಳಗಾಗಿದೆ. ಇಲ್ಲಿನ ಮೀನುಗಳಿಗೆ ಭಕ್ತರು ಆಹಾರ ನೀಡುವ ಪರಿಪಾಠ ಬೆಳೆದುಬಂದಿದೆ. ಹಾಗೆಯೇ ಇಲ್ಲಿನ ಮೀನುಗಳ ರಕ್ಷಣೆಗಾಗಿ ಈ ಪ್ರದೇಶದ 2 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

'ಮಗಳು ಜಾನಕಿ' ಈಗೇನು ಮಾಡ್ತಿದ್ದಾರೆ? ಅವರ ಹೊಸ ಪ್ರಯೋಗ ಏನು?

ಧಾರ್ಮಿಕ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದ್ದರೂ ರಾತ್ರಿ ವೇಳೆ ಈ ಪರಿಸರಕ್ಕೆ ಆಗಮಿಸಿದ ಅರಸಿನಮಕ್ಕಿ ನಿವಾಸಿಗರೆನ್ನಲಾದ 7 ಮಂದಿ ಮೀನು ಹಿಡಿಯುವ ಪರಿಕರಕಗಳೊಂದಿಗೆ ಮೀನು ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದರು.

ರೋಗಿಗಳ ನರಳಾಟ: ಸಚಿವ ಸುಧಾಕರ್ ಕೊಟ್ಟ ವಾರ್ನಿಂಗ್​ಗೆ ಆಸ್ಪತ್ರೆ ಮುಖ್ಯಸ್ಥರು ಥಂಡಾ

ಈ ಸಂದ​ರ್ಭ ಕಾವಲು ಕಾಯುತ್ತಿದ್ದ ದೇವಳದ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಗಳನ್ನು ಹಿಡಿದು ಧರ್ಮಸ್ಥಳ ಪೊಲೀಸರಿಗೊಪ್ಪಿಸಿದ್ದಾರೆ. ದೂರು ಸ್ವೀಕರಿಸಿದ ಧರ್ಮಸ್ಥಳ ಠಾಣಾಧಿಕಾರಿ ಪವನ್‌ ಕುಮಾರ್‌ ಆರೋಪಿಗಳಿಂದ ಮುಚ್ಚಳಿಕೆ ಬರೆಯಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು