ಶಿವಮೊಗ್ಗ ಪೊಲೀಸರ ಭರ್ಜರಿ ಭೇಟೆ : ಅಂತರ್ ಜಿಲ್ಲಾ ಬೈಕ್ ಕಳ್ಳರು ಅಂದರ್

Published : Aug 29, 2021, 01:56 PM IST
ಶಿವಮೊಗ್ಗ ಪೊಲೀಸರ ಭರ್ಜರಿ ಭೇಟೆ : ಅಂತರ್ ಜಿಲ್ಲಾ ಬೈಕ್ ಕಳ್ಳರು ಅಂದರ್

ಸಾರಾಂಶ

ಶಿವಮೊಗ್ಗ ತುಂಗಾನಗರ ಪೋಲಿಸರು ಭರ್ಜರಿ ಬೇಟೆ ನಾಲ್ವರು ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ

ಶಿವಮೊಗ್ಗ (ಆ.29): ಶಿವಮೊಗ್ಗ ತುಂಗಾನಗರ ಪೋಲಿಸರು ಭರ್ಜರಿ ಬೇಟೆ ನಡೆಸಿದ್ದು, ನಾಲ್ವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.

ತುಂಗಾನಗರ ಪಿಐ ದೀಪಕ್ ನೇತೃತ್ವದಲ್ಲಿಂದು ಕಾರ್ಯಾಚರಣೆ ನಡೆದಿದ್ದು 10,52,450 ರು. ಮೌಲ್ಯದ 22 ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. 

ಬಂಧಿತರನ್ನು ಭದ್ರಾವತಿಯ ಸುಹೇಲ್ ಪಾಷಾ (22), ಶಿವಮೊಗ್ಗದ ಮೊಹಮದ್ ಹ್ಯಾರೀಸ್ (22), ಫಜಲ್ (20), ಸಾಹೀಲ್ ಶೇಟ್ (20) ಎನ್ನಲಾಗಿದೆ. 

ಅರಣ್ಯಾಧಿಕಾರಿ ಗುಂಡೇಟು : ಶ್ರೀಗಂಧ ಕಳ್ಳ ಬಲಿ

ತುಂಗಾನಗರ ಪೊಲೀಸ್ ಠಾಣೆಯ 03 ಪ್ರಕರಣ , ದೊಡ್ಡಪೇಟೆ ಪೊಲೀಸ್ ಠಾಣೆಯ 5 ಪ್ರಕರಣ , ವಿನೋಬನಗರ ಪೊಲೀಸ್ ಠಾಣೆಯ 2 ಪ್ರಕರಣ , ಜಯನಗರ ಪೊಲೀಸ್ ಠಾಣೆಯ 02 ಪ್ರಕರಣ , ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ 1 ಪ್ರಕರಣ , ಶಿವಮೊಗ್ಗ ಗ್ರಾಮಾಂತರ ಠಾಣೆಯ 1 ಪ್ರಕರಣ  ಕುಂಸಿ ಪೊಲೀಸ್ ಠಾಣೆಯ 1 ಪ್ರಕರಣ , ಶಿರಾಳಕೊಪ್ಪ ಠಾಣೆಯ 03 ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿತ್ತು.  

 ದಾವಣೆಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯ 02 ಪ್ರಕರಣ,  ಚಿಕ್ಕಮಗಳೂರು ಜಿಲ್ಲೆ ಬೀರೂರು ಪೊಲೀಸ್ ಠಾಣೆಯ 01 ಪ್ರಕರಣ ಮತ್ತು ಕಡೂರು ಪೊಲೀಸ್ ಠಾಣೆಯ 1 ಪ್ರಕರಣ  ಒಟ್ಟು 22 ಪ್ರಕರಣಗಳಲ್ಲಿ ಈ ನಾಲ್ವರು ಅರೋಪಿಗಳಾಗಿದ್ದಾರೆ. 

 ಒಟ್ಟು 10,52,450 ರು. ಮೌಲ್ಯದ 22 ಬೈಕ್ ಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.

PREV
click me!

Recommended Stories

ಅರಣ್ಯ ಸಿಬ್ಬಂದಿ ಗುಂಡಿಗೆ 3 ಬೇಟೆಗಾರರು ಬಲಿ ಪ್ರಕರಣ; ಶವ ಏಕೆ ಮೈಸೂರಿಗೆ ತಂದರು? ಸಂಸದರ ಸಂಶಯದ ಪ್ರಶ್ನೆಗೆ ಉತ್ತರ ಇಲ್ಲ!
ಉತ್ತರಕನ್ನಡದಲ್ಲಿ ಉಲ್ಟಾ, ವಿಜಯಪುರದಲ್ಲಿ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!