ಚಿಕ್ಕಮಗಳೂರು ಪ್ರವಾಸದ ಪ್ಲಾನ್ ಇದ್ಯಾ ? 3 ದಿನ ನಿರ್ಬಂಧವಿದೆ

Published : Nov 28, 2019, 10:19 AM IST
ಚಿಕ್ಕಮಗಳೂರು ಪ್ರವಾಸದ ಪ್ಲಾನ್ ಇದ್ಯಾ ? 3 ದಿನ ನಿರ್ಬಂಧವಿದೆ

ಸಾರಾಂಶ

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ದತ್ತಮಾಲಾ ಜಯಂತಿ ಹಿನ್ನೆಲೆ ಇಲ್ಲಿನ ಹಲವು ಪ್ರದೇಶಗಳಿಗೆ ಎಂಟ್ರಿ ಇರುವುದಿಲ್ಲ.

ಚಿಕ್ಕಮಗಳೂರು (ನ.28): ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಡಿ.10ರಿಂದ 12 ರವರೆಗೆ ದತ್ತ ಜಯಂತಿ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಹಲವು ಪ್ರದೇಶಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. 

ಡಿ.9 ರ ಸಂಜೆ 6 ಗಂಟೆಯಿಂದ ಡಿ.13ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ ಮತ್ತು ದತ್ತಪೀಠಕ್ಕೆ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

10, 11, 12 ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಆಗಿಲಿದ್ದು, ಡಿಸೆಂಬರ್ 13 ರ ಬೆಳಗ್ಗೆ‌ 6 ರವರೆಗೆ ಇಲ್ಲಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಕಾಲುವೆ ರಹಸ್ಯ: ಕೊನೆಗೂ ಬಯಲಾಯ್ತು ಮೂಡಿಗೆರೆ ಭೂಕುಸಿತದ ಹಿಂದಿನ ಕಾರಣ!...

ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಮಗಳೂರಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ನೀಡಿದ್ದಾರೆ. 

PREV
click me!

Recommended Stories

ಶಿವಮೊಗ್ಗಕ್ಕೆ ರಾಜ್ಯದ ಮತ್ತೊಂದು 'ಐಟಿ ಹಬ್' ಆಗುವ ಸಾಮರ್ಥ್ಯವಿದೆ: 'ನೆಮ್ಮದಿ ಹಾಳು ಮಾಡಬೇಡಿ' ಎಂದ ಮಲೆನಾಡಿಗರು!
ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!