ಸರ್ಕಾರಕ್ಕೆ ವಂಚಿಸಿದ ಎಸ್‌ಡಿಎಗೆ 2 ಕೋಟಿ ದಂಡ, 2 ವರ್ಷ ಶಿಕ್ಷೆ

Kannadaprabha News   | Asianet News
Published : Aug 31, 2020, 07:15 AM IST
ಸರ್ಕಾರಕ್ಕೆ ವಂಚಿಸಿದ ಎಸ್‌ಡಿಎಗೆ 2 ಕೋಟಿ ದಂಡ, 2 ವರ್ಷ ಶಿಕ್ಷೆ

ಸಾರಾಂಶ

ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ವಂಚಿಸಿದ ದ್ವಿತೀಯ ದರ್ಜೆ ಸಹಾಯಕನೋರ್ವನಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಚಿಕ್ಕಮಗಳೂರು (ಆ.31): ಮೇಲಾಧಿಕಾರಿಗಳ ಸಹಿಗಳನ್ನು ಪೋರ್ಜರಿ ಮಾಡಿ ಸರ್ಕಾರಕ್ಕೆ 1.29 ಕೋಟಿ ರು. ವಂಚಿಸಿರುವ ಜಿಲ್ಲೆಯ ತರೀಕೆರೆಯ ಅರಣ್ಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ 2 ಕೋಟಿ ರು. ಸಂದಾಯ ಮಾಡುವಂತೆ ಶನಿವಾರ ತೀರ್ಪು ನೀಡಿ ಜತೆಗೆ 2 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ದ್ವಿತೀಯ ದರ್ಜೆ ಸಹಾಯಕ ಮೋಹನ್‌ಕುಮಾರ್‌ ಇಲಾಖೆ ಹಣವನ್ನು ವಿವಿಧ ಹಂತಗಳಲ್ಲಿ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು. ಈ ಸಂಬಂಧ ತರೀಕೆರೆಯ ಡಿವೈಎಸ್ಪಿ ಎಚ್‌.ಬಿ.ಮಲ್ಲಿಕಾರ್ಜುನಪ್ಪ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸೋಂಕಿತೆಯ ಶವದಲ್ಲಿದ್ದ ಮಾಂಗಲ್ಯ ಮಂಗಮಾಯ!...

ಪ್ರಕರಣದ ವಿಚಾರಣೆ ನಡೆಸಿದ 2ನೇ ಜಿಲ್ಲಾ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನಂಜೇಗೌಡ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ .2 ಕೋಟಿ ಪಾವತಿ ಮಾಡಬೇಕು ಅಥವಾ ಒಂದು ವೇಳೆ ಹಣ ಪಾವತಿಸದಿದ್ದಲ್ಲಿ ಮತ್ತೆ 3 ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎನ್‌.ಗೋವಿಂದರಾಜ್‌ ಅವರು ವಾದ ಮಾಡಿದ್ದರು.

PREV
click me!

Recommended Stories

ಸವದತ್ತಿಯ ಭೀರೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ, ಮೂರ್ತಿ ಕದ್ದು ಹೊರವಲಯದಲ್ಲಿ ಬಿಸಾಕಿದ ಕಳ್ಳರು
ಬಿಗ್‌ ಟ್ವಿಸ್ಟ್: ಡಿಜಿಪಿ ರಾಮಚಂದ್ರರಾವ್ ರಂಗಿನಾಟಕ್ಕೆ ಕುಂದಾನಗರಿ ಬೆಳಗಾವಿ ನಂಟು?