ಮತ ಕೇಳಲು ಹೋದ ಕೈ ಶಾಸಕರಿಗೆ ಕ್ಲಾಸ್ ಜನ!

Published : Apr 30, 2018, 04:30 PM ISTUpdated : Apr 30, 2018, 06:13 PM IST
ಮತ ಕೇಳಲು ಹೋದ ಕೈ ಶಾಸಕರಿಗೆ ಕ್ಲಾಸ್ ಜನ!

ಸಾರಾಂಶ

ಹುಣಸೂರು ಕಾಂಗ್ರೆಸ್ ಶಾಸಕ ಎಚ್’ಪಿ ಮಂಜುನಾಥ್’ಗೆ ಸಾರ್ವಜನಿಕರು ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.  ಎಚ್ ಪಿ ಮಂಜುನಾಥ್ ಕಚುವಿನಹಳ್ಳಿ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದಾಗ ಜನರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  

ಮೈಸೂರು (ಏ. 30): ಹುಣಸೂರು ಕಾಂಗ್ರೆಸ್ ಶಾಸಕ ಎಚ್’ಪಿ ಮಂಜುನಾಥ್’ಗೆ ಸಾರ್ವಜನಿಕರು ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.    

ಎಚ್ ಪಿ ಮಂಜುನಾಥ್ ಕಚುವಿನಹಳ್ಳಿ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದಾಗ ಜನರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  ನೀವು ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಮತ ಕೇಳಲು ಬಂದಿದ್ದೀರಿ ಎಂದು  ಶಾಸಕರಿಗೆ  ಗ್ರಾಮದ ಜನ ಪ್ರಶ್ನಿಸಿದ್ದಾರೆ. 

ಗ್ರಾಮಸ್ಥರ ಪ್ರಶ್ನೆಗೆ ಶಾಸಕರು ಉತ್ತರ ಕೊಡಲು ಮುಂದಾದಾಗ  ಜನ ಸಮಾಧಾನಗೊಳ್ಳಲಿಲ್ಲ.  ಈ ವೇಳೆ ಗ್ರಾಮದ ಓರ್ವನನ್ನು ತರಾಟೆಗೆ ಶಾಸಕ ಮಂಜುನಾಥ್  ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಶಾಸಕ ಮತ್ತು ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ.  ಈ ವೇಳೆ ವ್ಯಕ್ತಿಯನ್ನು ಕತ್ತಿನ ಪಟ್ಟಿ ಹಿಡಿದು ಶಾಸಕ ಮಂಜುನಾಥ್ ನೂಕಿದ್ದಾರೆ.  ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ  ಶಾಸಕರು ಮತ ಕೇಳದೆ ಹಾಗೇ ವಾಪಸ್ಸಾಗಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ