Karnataka Assembly Election- 2018
ಇದುವರರೆಗೆ ಬಂದಿರುವ ಮತ ಎಣಿಕೆ ವರದಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಜೆಡಿಡಸ್ ಅಭ್ಯರ್ಥಿ ಜಿ ಟಿ ದೇವೇಗೌಡರು ಗೆಲುವಿನ ಹಾದಿಯಲ್ಲಿದ್ದಾರೆ. 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುಂದಿದ್ದಾರೆ. ಚಾಮುಂಡಿ ಸಿದ್ದರಾಮಯ್ಯನವರನ್ನು ಕೈ ಬಿಟ್ಟ ಹಾಗೆ ಕಾಣುತ್ತಿದೆ.
ಮೈಸೂರು (ಮೇ. 15): ಇದುವರರೆಗೆ ಬಂದಿರುವ ಮತ ಎಣಿಕೆ ವರದಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಜೆಡಿಡಸ್ ಅಭ್ಯರ್ಥಿ ಜಿ ಟಿ ದೇವೇಗೌಡರು ಗೆಲುವಿನ ಹಾದಿಯಲ್ಲಿದ್ದಾರೆ. 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುಂದಿದ್ದಾರೆ. ಚಾಮುಂಡಿ ಸಿದ್ದರಾಮಯ್ಯನವರನ್ನು ಕೈ ಬಿಟ್ಟ ಹಾಗೆ ಕಾಣುತ್ತಿದೆ.
ಅತ್ತ ಬಾದಾಮಿಯಲ್ಲಿ ಸಿದ್ದರಾಮಯ್ಯ ಸುಮಾರು 3 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸದ್ಯದ ವರದಿಗಳ ಪ್ರಕಾರ ಹಿನ್ನಡೆ ಸಾಧಿಸಿದ್ದಾರೆ. ಈ ಸ್ಥಿತಿಗತಿ ನೋಡಿದರೆ ಸಿದ್ದರಾಮಯ್ಯನವರು ಎರಡೂ ಕ್ಷೇತ್ರಗಳಿಂದ ಯಾಕೆ ಸ್ಪರ್ಧಿಸಿದರು ಎಂದು ದೇಶಕ್ಕೆ ಗೊತ್ತಾಗುತ್ತದೆ.