ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದ ಸಿಎಂ ಸಿದ್ದರಾಮಯ್ಯ

First Published May 12, 2018, 8:21 AM IST
Highlights

ಇಂದು ರಾಜ್ಯದಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ಆರಂಭವಾಗಿದೆ.   ರಾಜ್ಯದೆಲ್ಲೆಡೆ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಬರೆಯಲು ವಿವಿಧೆಡೆ ಮತ ಚಲಾವಣೆ ಮಾಡಲಾಗುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಮತ ಚಲಾಯಿಸುವಂತೆ  ಕರೆ ನೀಡಿದ್ದಾರೆ. 

ಬೆಂಗಳೂರು : ಇಂದು ರಾಜ್ಯದಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ಆರಂಭವಾಗಿದೆ.   ರಾಜ್ಯದೆಲ್ಲೆಡೆ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಬರೆಯಲು ವಿವಿಧೆಡೆ ಮತ ಚಲಾವಣೆ ಮಾಡಲಾಗುತ್ತಿದೆ. 

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಮತ ಚಲಾಯಿಸುವಂತೆ  ಕರೆ ನೀಡಿದ್ದಾರೆ.  ಪ್ರತಿಯೊಬ್ಬರೂ ಕೂಡ ಮತ ಚಲಾಯಿಸಿ, ಪ್ರಜಾಪ್ರಭುತ್ವ ಎತ್ತಿ ಹಿಡಿಯಿರಿ ಎಂದು ಸಿಎಂ ರಾಜ್ಯದ ಮತದಾರರಿಗೆ ಕರೆ ನೀಡಿದ್ದಾರೆ. 

ವಿಶೇಷವಾಗಿ ಯುವಜನತೆ ವೋಟ್ ಮಾಡಬೇಕು ಎಂದು ಸಿಎಂ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಮತದಾನಕ್ಕೆ ಪ್ರೇರಣೆ ನೀಡಿದ್ದು, ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. 

 

ನಮ್ಮ ಕರ್ನಾಟಕವು ಚುನಾವಣೆಗೆ ಸಿದ್ದವಾಗಿದೆ, ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜನರು, ವಿಶೇಷವಾಗಿ ಯುವ ಜನತೆ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿ ಕೇಳಿಕೊಳ್ಳುತ್ತೇನೆ.

ಕರ್ನಾಟಕದಲ್ಲಿ ಕಳೆದ ಐದು ವರ್ಷದಲ್ಲಾದ ಅಭಿವೃದ್ಧಿ ಮುಂದುವರೆಯಲು ಹಾಗೂ ನಿರಂತರ ಪ್ರಗತಿಗಾಗಿ, ದಯಮಾಡಿ ನಿಮ್ಮ ಮತ ಚಲಾಯಿಸಿ.

— Siddaramaiah (@siddaramaiah)
click me!