ಸರ್ಕಾರ ರಚನೆಗೆ ಬಿಜೆಪಿಯಿಂದಲೂ ಸರ್ಕಸ್

First Published May 15, 2018, 3:56 PM IST
Highlights

ಜಾತ್ಯಾತೀತ ಜನತಾದಳಕ್ಕೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಅಧಿಕೃತ ಬೆಂಬಲ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಬಿಜೆಪಿ ಕೂಡ ತಾವೇನು ಕಡಿಮೆಯಿಲ್ಲ ಎಂಬಂತೆ ದೇವೇಗೌಡರನ್ನು ಭೇಟಿ ಮಾಡಲು ನಿರ್ಧರಿಸಿದೆ. 

ಬೆಂಗಳೂರು(ಮೇ.15): ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದ ಹಿನ್ನಲೆಯಲ್ಲಿ ಎರಡೂ ಪಕ್ಷಗಳು ಸರ್ಕಾರ ರಚನೆಗೆ ಜೆಡಿಎಸ್ ಹಿಂದೆ ಬಿದ್ದಿವೆ.
ಜಾತ್ಯಾತೀತ ಜನತಾದಳಕ್ಕೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಅಧಿಕೃತ ಬೆಂಬಲ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಬಿಜೆಪಿ ಕೂಡ ತಾವೇನು ಕಡಿಮೆಯಿಲ್ಲ ಎಂಬಂತೆ ದೇವೇಗೌಡರನ್ನು ಭೇಟಿ ಮಾಡಲು ನಿರ್ಧರಿಸಿದೆ. 
ಅಮಿತ್ ಶಾ ಆಜ್ಞೆಯ ಮೇರೆಗೆ ಹಿರಿಯ ನಾಯಕ ಆರ್.ಅಶೋಕ್  ಇಂದು ಸಂಜೆ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.  ಈ ನಡುವೆ  ಬಿಎಸ್'ವೈ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವಂತೆ ಅವಕಾಶ ಕೋರಿದ್ದಾರೆ. 

ಒಟ್ಟು ಸ್ಥಾನ : 222

ಬಿಜೆಪಿ : 104

ಕಾಂಗ್ರೆಸ್: 78

ಜೆಡಿಎಸ್: 38

ಇತರ: 2

click me!