ಅಭ್ಯಾಸ ಬಲದಿಂದ ಎಡವಟ್ಟು ಮಾಡಿದ ಉತ್ತಪ್ಪ, ಸಂಕಷ್ಟದಲ್ಲಿ ಕನ್ನಡಿಗ!

Published : Oct 01, 2020, 03:35 PM IST
ಅಭ್ಯಾಸ ಬಲದಿಂದ ಎಡವಟ್ಟು ಮಾಡಿದ ಉತ್ತಪ್ಪ, ಸಂಕಷ್ಟದಲ್ಲಿ ಕನ್ನಡಿಗ!

ಸಾರಾಂಶ

ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ ಅಭ್ಯಾಸ ಬಲದಿಂದ ಎಡವಟ್ಟು ಮಾಡಿದ್ದಾರೆ. ಕ್ಯಾಚ್ ಡ್ರಾಪ್ ಮಾಡಿದ ಬೆನ್ನಲ್ಲೇ ಉತ್ತಪ್ಪ ಮಾಡಿದ ತಪ್ಪಿಗೆ ದಂಡ ವಿಧಿಸುವ ಸಾಧ್ಯತೆ ಇದೆ. ಕೆಕೆಆರ್ ವಿರುದ್ಧ ಉತ್ತಪ್ಪ ಮಾಡಿದ ಮಿಸ್ಟೇಕ್ ಏನು?

ದುಬೈ(ಸೆ.30): ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಆಟಗಾರ ರಾಬಿನ್ ಉತ್ತಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುನಿಲ್ ನೈರೈನ್ ಕ್ಯಾಚ್ ಡ್ರಾಪ್ ಮಾಡಿದ ಬೆನ್ನಲ್ಲೇ ಉತ್ತಪ್ಪ ಮಾಡಿದ ತಪ್ಪು ಇದೀಗ ಮ್ಯಾಚ್ ರೆಫ್ರಿ ಕಣ್ಣು ಕೆಂಪಾಗಿಸಿದೆ. ಕ್ಯಾಚ್ ಕೈಚೆಲ್ಲಿದ ರಾಬಿನ್ ಉತ್ತಪ್ಪ ಬಾಲ್ ಹಿಡಿದು ಎಂಜಲು ಸವರಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದೆ.

ಸೋಲಿಲ್ಲದ ಸರದಾರ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕೆಕೆಆರ್‌ ಗೆದ್ದಿದ್ದು ಹೇಗೆ?

ಕೊರೋನಾ ವೈರಸ್ ಕಾರಣ ಐಸಿಸಿ ತಾತ್ಕಾಲಿಕವಾಗಿ ಬಾಲ್‌ಗೆ ಎಂಜಲು ಸವರುವುದು ಬ್ಯಾನ್ ಮಾಡಿದೆ. ಆದರೆ ಉತ್ತಪ್ಪ ಅರಿವಿಲ್ಲದಂತೆ ಎಂಜಲು ಸವರಿಸಿದ್ದಾರೆ. ಉತ್ತಪ್ಪ ಎಂಜಲು ಸವರುತ್ತಿರು ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂಜಲು ಸವರುವ ಮೂಲಕ ರಾಬಿನ್ ಉತ್ತಪ್ಪ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ.

 

ಬಾಲ್‌ಗೆ ಎಂಜಲು ಸವರಿದರೆ ಒಂದು ಇನ್ನಿಂಗ್ಸ್‌ನಲ್ಲಿ 2 ಬಾರಿ ತಂಡಕ್ಕೆ ಅಂಪೈರ್ ಎಚ್ಚರಿಕೆ ನೀಡಲಿದ್ದಾರೆ. 3ನೇ ಬಾರಿ ತಪ್ಪು ಮರುಕಳಿಸಿದರೆ ಎದುರಾಳಿಗೆ ಪೆನಾಲ್ಟಿಯಾಗಿ 5 ರನ್ ನೀಡಲಾಗುತ್ತದೆ. ಇಷ್ಟೇ ಅಲ್ಲ ಚೆಂಡನ್ನು ಶುಚಿಗೊಳಿಸದ ಬಳಿಕವೇ ಮತ್ತ ಆಟಕ್ಕೆ ಬಳಸಬೇಕು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಒಂದು ಬಾರಿ ಈ ರೀತಿ ಮಾಡಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಗಲ್ಲ ಅಂತ ಗೊತ್ತಿದ್ರೂ ಕ್ಯಾಮರೋನ್‌ ಗ್ರೀನ್‌ಗೆ ಮುಂಬೈ ಬಿಡ್‌ ಮಾಡಿದ್ದೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಆಕಾಶ್ ಅಂಬಾನಿ!
IPL 2026 RCB Full Squad: ಸತತ ಎರಡನೇ ಬಾರಿಗೆ ಕಪ್ ಗೆಲ್ಲಲು ಆರ್‌ಸಿಬಿ ಸಜ್ಜು! ಹರಾಜಿನ ಬಳಿಕ ತಂಡ ಹೀಗಿದೆ