
ಅಬು ಧಾಬಿ(ನ.06) : ಎಲಿಮಿನೇಟರ್ ಪಂದ್ಯದಲ್ಲಿ ಎಚ್ಚರಿಕೆ ಅಗತ್ಯ. ಇಷ್ಟೇ ಅಲ್ಲ ದಿಟ್ಟ ಹೋರಾಟ ನೀಡಲೇಬೇಕು. ಕಾರಣ ಒಂದು ಸಣ್ಣ ತಪ್ಪಿನಿಂದ ಟೂರ್ನಿಯಿಂದಲೇ ಹೊರಬೀಳವು ಸಂದರ್ಭ ಸೃಷ್ಟಿಯಾಗಲಿದೆ. ಇದೇ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 131 ರನ್ ಸಿಡಿಸಿದೆ.
ಎಬಿ ಡಿವಿಲಿಯರ್ಸ್ ಹಾಗೂ ಆ್ಯರೋನ್ ಫಿಂಚ್ ಹೋರಾಟ ಆರ್ಸಿಬಿ ತಂಡದ ಮಾನ ಕಾಪಾಡಿತು. ಕಾರಣ ಆರಂಭಿಕನಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಅಬ್ಬರಿಸಲಿಲ್ಲ. ಕೊಹ್ಲಿ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಆರ್ಸಿಬಿಗೆ ಉತ್ತಮ ಆರಂಭ ನೀಡುತ್ತಿದ್ದ ದೇವದತ್ ಪಡಿಕ್ಕಲ್ ಕೇವಲ 1 ರನ್ ಸಿಡಿಸಿ ಔಟಾದರು.
ಆ್ಯರೋನ್ ಫಿಂಚ್ 32 ರನ್ ಕಾಣಿಕೆ ನೀಡಿದರು. ಎಬಿ ಡಿವಿಲಿಯರ್ಸ್ ಅರ್ಧಶತಕ ಸಿಡಿಸಿ ಹೋರಾಟ ಮುಂದುವರಿಸಿದರು. ಆದರೆ ಮೊಯಿನ್ ಆಲಿ, ಶಿವಂ ದುಬೆ ಜವಾಬ್ದಾರಿ ಮರೆತರು. ವಾಶಿಂಗ್ಟನ್ ಸುಂದರ್ ಕ್ರೀಸ್ನಲ್ಲಿ ಕಾಣಿಸಲೇ ಇಲ್ಲ. ಎಬಿಡಿ 56 ರನ್ ಸಿಡಿಸಿ ಔಟಾದರು.
ಎಬಿಡಿ ಹೋರಾಟದಿಂದ ಆರ್ಸಿಬಿ 7 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು. ಅಬು ದಾಬಿ ಪಿಚ್ನಲ್ಲಿ ಸನ್ರೈಸರ್ಸ್ ಈ ಮೊತ್ತ ಚೇಸ್ ಮಾಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಇತ್ತ ಆರ್ಸಿಬಿ ಪ್ರಮುಖ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿರುವುದು ಕುತೂಹಲ ಹೆಚ್ಚಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.