IPL 2020: ರಾಜಸ್ಥಾನಕ್ಕೆ ಸೋಲುಣಿಸಿದ ಡೆಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ!

Published : Oct 09, 2020, 11:30 PM IST
IPL 2020: ರಾಜಸ್ಥಾನಕ್ಕೆ ಸೋಲುಣಿಸಿದ ಡೆಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ!

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 46 ರನ್ ಗೆಲುವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಡೆಲ್ಲಿ

ಶಾರ್ಜಾ(ಅ.09):  ರಾಜಸ್ಥಾನ ರಾಯಲ್ಸ್ ವಿರುದ್ಧದ 23ನೇ ಐಪಿಎಲ್ ಲೀಗ್ ಪಂದ್ಯದಲ್ಲಿ 46 ರನ್ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ. ಇಷ್ಟೇ ಅಲ್ಲ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡ ಅನ್ನೋದನ್ನು ಮತ್ತೆ ಸಾಬೀತು ಮಾಡಿದೆ.

185 ರನ್ ಟಾರ್ಗೆಟ್ ಪೆಡದ ರಾಜಸ್ಥಾನ ರಾಯಲ್ಸ್ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಜೋಸ್ ಬಟ್ಲರ್ 13 ರನ್ ಸಿಡಿಸಿ ಔಟಾದರು. ಆದರೆ ಯಶಸ್ವಿ ಜೈಸ್ವಾಲ್ ಹೋರಾಟ ಮುಂದುವರಿಸಿದರು. ಇತ್ತ ನಾಯಕ ಸ್ಟೀವ್ ಸ್ಮಿತ್ 24 ರನ್ ಸಿಡಿಸಿ ನಿರ್ಗಿಸಿದರು.

ಸಂಜು ಸಾಮ್ಸನ್ ಹಾಗೂ ಮಹೀಪಾಲ್ ಲೊಮ್ರೊರ್ ಅಬ್ಬರಿಸಿಲ್ಲ. ಹಿಂದಿನ ಪಂದ್ಯದಲ್ಲಿ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ ಜೋಫ್ರಾ ಆರ್ಚರ್, ಡೆಲ್ಲಿ ವಿರುದ್ಧ ಸೈಲೆಂಟ್ ಆದರು.  ಇನ್ನು ಆ್ಯಂಡ್ರೂ ಟೈ 6 ರನ್ ಸಿಡಿಸಿ ನಿರ್ಗಿಸಿದರು. ಹೀಗಾಗಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ರಾಹುಲ್ ಟಿವಾಟಿಯಾ ಹೆಗಲ ಮೇಲಿ ಬಿತ್ತು.

ರಾಹುಲ್ ಟಿವಾಟಿಯಾ ಅಬ್ಬರ ಆರಂಭಿಸಿದರು. ರನ್ ಗಳಿಸಲು ಪರದಾಡಿದ ರಾಜಸ್ಥಾನ ತಂಡಕ್ಕೆ ರಾಹುಲ್ ಟಿವಾಟಿಯಾ ಬ್ಯಾಟಿಂಗ್ ಗೆಲುವಿನ ಆಸೆ ಚಿಗುರಿಸಿತು. ರಾಜಸ್ತಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 56  ರನ್ ಅವಶ್ಯಕತೆ ಇತ್ತು. ರಾಹುಲ್ ಟಿವಾಟಿಯಾ 38 ರನ್ ಸಿಡಿಸಿ ಔಟಾದರು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ಸೋಲು ಖಚಿತಗೊಂಡಿತು.

ಕಾರ್ತಿಕ್ ತ್ಯಾಗಿ ಹಾಗೂ ವರುಣ್ ಆ್ಯರೋನ್ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. 19.4 ಓವರ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ 138 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಡೆಲ್ಲಿ 46 ರನ್ ಗೆಲುವು ದಾಖಲಿಸಿತು. ರಾಜಸ್ಥಾನ 4ನೇ ಸೋಲಿಗೆ ಗುರಿಯಾಯಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗುತ್ತಾ? 16,700 ಕೋಟಿ ಡೀಲ್ ನಂತರ ಮಹತ್ವದ ಅಪ್‌ಡೇಟ್ಸ್ ಕೊಟ್ಟ ಅನನ್ಯಾ ಬಿರ್ಲಾ!
ಸದನದಲ್ಲೂ IPL Ticket ಹವಾ; ಕ್ರಿಕೆಟ್ ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!