ಸುರೇಶ್‌ ರೈನಾ ನನ್ನ ಮಗ ಇದ್ದಂತೆ ಆದರೆ ಸಿಎಸ್‌ಕೆಗೆ ಮತ್ತೆ ಕರೆಯುವುದಿಲ್ಲ: ಶ್ರೀನಿವಾಸನ್‌

By Suvarna NewsFirst Published Sep 3, 2020, 11:24 AM IST
Highlights

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಸುರೇಶ್ ರೈನಾ ಬಗ್ಗೆ ಸಿಎಸ್‌ಕೆ ತಂಡ ಸಹ ಮಾಲೀಕ ಎನ್‌ ಶ್ರೀನಿವಾಸನ್ ಮತ್ತೊಮ್ಮೆ ಮಾತನಾಡಿದ್ದಾರೆ. ಏನಂದ್ರು ಶ್ರೀನಿ ನೀವೇ ನೋಡಿ

ನವದೆಹಲಿ(ಸೆ.03): ಕ್ರಿಕೆಟಿಗ ಸುರೇಶ್‌ ರೈನಾ ನನ್ನ ಮಗನಿದ್ದಂತೆ. ಆದರೆ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ)ಗೆ ಮತ್ತೆ ಕರೆತರುವ ಕೆಲಸವನ್ನು ನಾನು ಮಾಡಲಾರೆ. ಆ ಕುರಿತು ಧೋನಿ ನೇತೃತ್ವದ ಸಿಎಸ್‌ಕೆ ಆಡಳಿತ ನಿರ್ಧರಿಸಬೇಕು ಎಂದು ಚೆನ್ನೈ ತಂಡದ ಮಾಲೀಕ ಎನ್‌. ಶ್ರೀನಿವಾಸನ್‌ ಹೇಳಿದ್ದಾರೆ. 

ಆಟಗಾರರ ವಿಚಾರದಲ್ಲಿ ಫ್ರಾಂಚೈಸಿ ಯಾವತ್ತೂ ಮೂಗು ತೂರಿಸಿಲ್ಲ. ಸಿಎಸ್‌ಕೆ ಯಶಸ್ಸಿಗೆ ಇದೇ ಕಾರಣ ಎಂದು ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸುರೇಶ್ ರೈನಾ ಅವರ ಹೆಸರೆತ್ತದೆಯೇ ಕೆಲ ಆಟಗಾರರಿಗೆ ಯಶಸ್ಸಿನ ಅಮಲು ನೆತ್ತಿಗೇರಿದೆ ಎಂದು ಶ್ರೀನಿವಾಸನ್ ಕಿಡಿಕಾರಿದ್ದರು. 

CSK ತಂಡ ಕೂಡಿಕೊಳ್ಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ..!

ಈ ನಡುವೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರೈನಾ, ಐಪಿಎಲ್‌ನಿಂದ ಹೊರಬರಲು ಕುಟುಂಬದ ಮೇಲಿನ ಕಾಳಜಿಯೇ ಕಾರಣ ಎಂದಿದ್ದಾರೆ. ಸಿಎಸ್‌ಕೆ ತಂಡ ನನ್ನ ಕುಟುಂಬ ಇದ್ದಂತೆ. ಧೋನಿ ಭಾಯ್‌ ನನಗೆ ಬಹಳ ಮುಖ್ಯ. ಹೀಗಾಗಿ ಐಪಿಎಲ್‌ನಿಂದ ಹೊರಬರುವ ನಿರ್ಧಾರ ಕಠಿಣವಾಗಿತ್ತು ಎಂದು ಹೇಳಿದ್ದಾರೆ.

ಆಗಸ್ಟ್ 29ರಂದು ಸುರೇಶ್ ರೈನಾ ದಿಢೀರ್ ಎನ್ನುವಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಭಾರತಕ್ಕೆ ಬಂದಿದ್ದರು. ವೈಯುಕ್ತಿಕ ಸಮಸ್ಯೆಯ ಕಾರಣ ನೀಡಿ ರೈನಾ ತವರಿಗೆ ಮರಳಿದ್ದರು. ಇದರ ಬೆನ್ನಲ್ಲೇ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಿದ್ದವು.


 

click me!