'ನನಗೇನಾದರೂ ಆದರೆ ಮೋದಿಯೇ ನೇರ ಹೊಣೆ'

By Web DeskFirst Published Feb 4, 2019, 8:32 AM IST
Highlights

'ನನಗೇನಾದರೂ ಆದರೆ ಮೋದಿಯೇ ಹೊಣೆ' ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ರಾಳೇಗಣ ಸಿದ್ಧಿ[ಫೆ.04]: ‘ನನಗೇನಾದರೂ ಹೆಚ್ಚುಕಮ್ಮಿ ಆದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ನೇರ ಹೊಣೆ. ಜನರು ಅವರನ್ನೇ ಕೇಳುತ್ತಾರೆ’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಕೇಂದ್ರದಲ್ಲಿ ಲೋಕಪಾಲ, ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲು ಆಗ್ರಹಿಸಿ ‘ಜನ ಆಂದೋಲನ ಸತ್ಯಾಗ್ರಹ’ ಹೆಸರಿನಲ್ಲಿ ಜನವರಿ 30ರಿಂದ ಅನಿರ್ದಿಷ್ಟಾವಧಿ ನಿರಶನ ಕೈಗೊಂಡಿರುವ ಅಣ್ಣಾ , ‘ಮೋದಿ ಸರ್ಕಾರ ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.

ಅಲ್ಲದೇ ನಾನು ಪದ್ಮ ಪ್ರಶಸ್ತಿ ವಾಪಸು ಮರಳಿಸಬೇಕಾಗುತ್ತದೆ’ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು

click me!