ಕತ್ತು ಕತ್ತರಿಸಿಕೊಳ್ಳುವೆ, ಆದರೆ ಬಿಜೆಪಿಗೆ ತಲೆಬಾಗಲ್ಲ: ಮಮತಾ!

Published : Jan 26, 2021, 01:50 PM IST
ಕತ್ತು ಕತ್ತರಿಸಿಕೊಳ್ಳುವೆ, ಆದರೆ ಬಿಜೆಪಿಗೆ ತಲೆಬಾಗಲ್ಲ: ಮಮತಾ!

ಸಾರಾಂಶ

ಕತ್ತು ಕತ್ತರಿಸಿಕೊಳ್ಳುವೆ, ಆದರೆ ಬಿಜೆಪಿಗೆ ತಲೆಬಾಗಲ್ಲ: ಮಮತಾ| ನೇತಾಜಿ ಜನ್ಮ ದಿನದ ಘಟನೆ ಬಗ್ಗೆ ಬಿಜೆಪಿಗೆ ತಿರುಗೇಟು

ಮುಂಬೈ(ಜ.26): ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನಾಚರಣೆ ಕಾರ್ಯಕ್ರಮದ ವೇಳೆ ಸಭಿಕರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನನ್ನ ಕತ್ತನ್ನು ಕತ್ತರಿಸಿಕೊಳ್ಳುತ್ತೇನೆಯೇ ಹೊರತು ಬಿಜೆಪಿಗೆ ತಲೆ ಬಾಗುವುದಿಲ್ಲ’ ಎಂದು ಗುಡುಗಿದ್ದಾರೆ.

ಹೂಗ್ಲಿಯಲ್ಲಿ ಆಯೋಜಿಸಿದ್ದ ಸಭೆಯೊಂದರ ವೇಳೆ ಮಾತನಾಡಿದ ಮಮತಾ, ‘ವಿಕ್ಟೋರಿಯ ಮೆಮೋರಿಯಲ್‌ನಲ್ಲಿ ಸಭಿಕರು (ಬಿಜೆಪಿಗರು) ಪ್ರಧಾನಿ ಸಮ್ಮುಖದಲ್ಲಿ ನನ್ನನ್ನು ಅಣಕಿಸಿದರು. ನೀವು ಮಾಡಿದ್ದು ಬೋಸ್‌ರನ್ನು ಅವಮಾನಿಸುವ ಕೆಲಸ. ಒಂದು ವೇಳೆ ನೀವು ಸುಭಾಷ್‌ಚಂದ್ರ ಬೋಸ್‌ರನ್ನು ಶ್ಲಾಘಿಸುವಂತಹ ಕೆಲಸ ಮಾಡಿದ್ದೀರಿ ಎಂಬುದನ್ನು ಸಾಬೀತುಪಡಿಸಿದರೆ ನಾನು ನನ್ನ ಕತ್ತನ್ನು ಕತ್ತರಿಸಿಕೊಳ್ಳುತ್ತೇನೆ. ಆದರೆ, ನೀವು ಬಲವಂತದಿಂದ ಹಾಗೂ ಗನ್‌ ತೋರಿಸಿ ಬೆದರಿಸಿದರೆ ಹೇಗೆ ಪ್ರತಿರೋಧ ತೋರಬೇಕು ಎಂಬುದು ನನಗೆ ಗೊತ್ತಿದೆ. ನಾನು ಯಾವುತ್ತೂ ಬಿಜೆಪಿಗೆ ತಲೆ ಬಾಗುವುದಿಲ್ಲ’ ಎಂದು ಹೇಳಿದ್ದಾರೆ.

ಜೈ ಶ್ರೀರಾಂಗೆ ಒತ್ತಡ ಹಾಕಿಲ್ಲ:

ಇದೇ ವೇಳೆ ಕಾರ್ಯಕ್ರಮದಲ್ಲಿ ಜೈ ಶ್ರೀರಾಂ ಎಂದು ಹೇಳುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ. ಒಂದು ವೇಳೆ ಸಭಿಕರು ಹೀಗೆ ಘೋಷಣೆಕೂಗಿದ್ದರೂ ಅನ್ಯಥಾ ಭಾವಿಸಬೇಕಾದ ಅಗತ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಈ ಮಧ್ಯೆ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಮುಖಂಡ ಸಂಜಯ್‌ ರಾವುತ್‌, ‘ಜೈ ಶ್ರೀರಾಂ ಎಂದು ಘೋಷಣೆ ಕೂತಿದ್ದಕ್ಕೆ ಯಾರೂ ಬೇಸರಪಟ್ಟಿಕೊಳ್ಳಬಾರದು. ಮಮತಾ ಬ್ಯಾನರ್ಜಿ ಅವರು ಕೂಡ ರಾಮನಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!