ಶೆಹಬಾಜ್ ಷರೀಫ್‌ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಮಾಡಿದ್ದೇಕೆ? ಪಾಕ್ ಸೇನಾ ಮುಖ್ಯಸ್ಥನ ದೊಡ್ಡ ಭಯ ರಿವೀಲ್!

Published : May 22, 2025, 07:19 PM ISTUpdated : May 22, 2025, 07:24 PM IST
ಶೆಹಬಾಜ್ ಷರೀಫ್‌ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಮಾಡಿದ್ದೇಕೆ? ಪಾಕ್ ಸೇನಾ ಮುಖ್ಯಸ್ಥನ ದೊಡ್ಡ ಭಯ ರಿವೀಲ್!

ಸಾರಾಂಶ

ಪಾಕಿಸ್ತಾನ ಸರ್ಕಾರವು ಮೇ 20, 2025ರಂದು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿದ್ದು, ಈ ನಿರ್ಧಾರವು ವಿಶ್ವದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಆಪರೇಷನ್ ಸಿಂದೂರ್‌ನಲ್ಲಿ ಭಾರತೀಯ ಸೇನೆಯಿಂದ ಹೀನಾಯವಾಗಿ ಸೋಲನುಭವಿಸಿದ ನಂತರವೂ ಶೆಹಬಾಜ್ ಷರೀಫ್ ಸರ್ಕಾರವು ಈ ನಿರ್ಧಾರ ಕೈಗೊಂಡಿದ್ದು, ಇದು ಅನೇಕರ ಗಮನ ಸೆಳೆದಿದೆ. 

ಇಸ್ಲಾಮಾಬಾದ್ (ಮೇ.22): ಪಾಕಿಸ್ತಾನ ಸರ್ಕಾರವು ಮೇ 20, 2025ರಂದು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿದ್ದು, ಈ ನಿರ್ಧಾರವು ವಿಶ್ವದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಆಪರೇಷನ್ ಸಿಂದೂರ್‌ನಲ್ಲಿ ಭಾರತೀಯ ಸೇನೆಯಿಂದ ಹೀನಾಯವಾಗಿ ಸೋಲನುಭವಿಸಿದ ನಂತರವೂ ಶೆಹಬಾಜ್ ಷರೀಫ್ ಸರ್ಕಾರವು ಈ ನಿರ್ಧಾರ ಕೈಗೊಂಡಿದ್ದು, ಇದು ಅನೇಕರ ಗಮನ ಸೆಳೆದಿದೆ. 

ಆಪರೇಷನ್ ಸಿಂದೂರ್‌ನ ಆಘಾತ: ಭಾರತೀಯ ಸೇನೆಯು ಆಪರೇಷನ್ ಸಿಂದೂರ್‌ನಡಿ ಪಾಕಿಸ್ತಾನದ ಭಯೋತ್ಪಾದಕರ ತಾಣಗಳನ್ನು ಧ್ವಂಸಗೊಳಿಸಿ, ವಾಯುನೆಲೆಗಳು ಮತ್ತು ಸೇನಾ ಶಿಬಿರಗಳನ್ನು ನಾಶಪಡಿಸಿತು. ಭಾರತೀಯ ಸೈನ್ಯದ ಪ್ರತಿದಾಳಿ ಹೇಗಿತ್ತೆಂದರೆ ಕದನ ವಿರಾಮಕ್ಕಾಗಿ ಪಾಕ್ ಸೇನೆ ಬೇಡಿಕೊಳ್ಳುವಂತಹ ಸ್ಥಿತಿಗೆ ಬಂದಿತು. ಈ ಸೋಲಿನ ಹೊರತಾಗಿಯೂ ಅಸಿಮ್ ಮುನೀರ್‌ಗೆ ಬಡ್ತಿ ನೀಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:

ಅಸಿಮ್ ಮುನೀರ್‌ನ ಗುಪ್ತ ಭಯ: ತಜ್ಞರ ಪ್ರಕಾರ, ಭಾರತೀಯ ಸೇನೆಯು ತನ್ನ ಅನೇಕ ಅಡಗುತಾಣಗಳನ್ನು ನಾಶಪಡಿಸಿದೆ ಎಂದು ಅಸಿಮ್ ಮುನೀರ್‌ಗೆ ತಿಳಿದಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನದ ಸೋಲಿಗೆ ತನ್ನ ವಿರುದ್ಧ ಕೋರ್ಟ್ ಮಾರ್ಷಲ್ ನಡೆಸದಂತೆ ಅವನು ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಪಾಕಿಸ್ತಾನದ ಇತಿಹಾಸವನ್ನು ನೋಡಿದರೆ, ಮಿಲಿಟರಿ ಸರ್ವಾಧಿಕಾರಿಗಳ ದೊಡ್ಡ ಪಟ್ಟಿಯೇ ಇದೆ. ಈ ಹಿಂದೆ ಸರ್ವಾಧಿಕಾರಿಗಳಾಗಿ ಮೆರೆದ ಪರ್ವೇಜ್ ಮುಷರಫ್‌ರಂತವರ ಉದಾಹರಣೆಯನ್ನು ನೋಡಿದಾಗ, ಅಸಿಮ್ ಮುನೀರ್‌ರ ಈ ಕ್ರಮವು ರಾಜಕೀಯ ಅಧಿಕಾರ ಕಸಿಯುವ ಯತ್ನವಾಗಿರಬಹುದು ಎಂಬ ಶಂಕೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: Karni Mata Temple: 30,000ಕ್ಕೂ ಹೆಚ್ಚು ಇಲಿಗಳಿರುವ ಈ ಮಂದಿರ ರಹಸ್ಯವೇನು?

ಪಾಕ್ ಸೇನೆಯ ವರ್ಚಸ್ಸಿನ ಹೋರಾಟ: ಪಾಕಿಸ್ತಾನದ ಸೇನೆಯು ದೇಶದ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಜನರಲ್ ಮುಷರಫ್‌ರ ಆಡಳಿತದಂತಹ ಉದಾಹರಣೆಗಳು ಸೇನೆಯ ಹಸ್ತಕ್ಷೇಪದ ಇತಿಹಾಸವನ್ನು ತೋರಿಸುತ್ತವೆ. ಶೆಹಬಾಜ್ ಷರೀಫ್ ಸರ್ಕಾರವು ಈ ಬಡ್ತಿಯ ಮೂಲಕ ಪಾಕಿಸ್ತಾನದ ಕಳಂಕಿತ ಪ್ರಜಾಪ್ರಭುತ್ವದ ಚಿತ್ರಣವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದು ತಜ್ಞರು ಭಾವಿಸಿದ್ದಾರೆ.
 
ಜಾಗತಿಕ ಪ್ರತಿಕ್ರಿಯೆ: ಈ ಬಡ್ತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಗೆಪಾಟಲಿಗೀಡಾಗಿದೆ. ಪಾಕ್ ಸೇನೆಯ ದೌರ್ಬಲ್ಯ ಮತ್ತು ರಾಜಕೀಯ ಅಸ್ಥಿರತೆಯನ್ನು ಮತ್ತಷ್ಟು ಬಯಲು ಮಾಡಿದೆ. ಈ ನಡೆಯು ಪಾಕಿಸ್ತಾನದ ಆಂತರಿಕ ರಾಜಕೀಯ ಡೈನಾಮಿಕ್ಸ್ ಮತ್ತು ಸೇನೆಯ ಪಾತ್ರದ ಬಗ್ಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಮುಂದೇನು?: ಅಸಿಮ್ ಮುನೀರ್‌ರ ಈ ಬಡ್ತಿಯು ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ಸಮತೋಲನದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಈಗಿನ ಪರಿಸ್ಥಿತಿಯಲ್ಲಿ, ಶೆಹಬಾಜ್ ಷರೀಫ್ ಸರ್ಕಾರವು ಈ ನಿರ್ಧಾರದಿಂದ ಉಂಟಾಗುವ ಒತ್ತಡವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಕೂತುಹಲ ಕೆರಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!