ಕೃಷಿ ಕಾಯ್ದೆಗೆ ತಡೆ ನೀಡಿದ್ದರೂ ಪ್ರತಿಭಟನೆ ಏಕೆ?: ರೈತರಿಗೆ ಸುಪ್ರೀಂ ಚಾಟಿ

Published : Oct 05, 2021, 07:35 AM IST
ಕೃಷಿ ಕಾಯ್ದೆಗೆ ತಡೆ ನೀಡಿದ್ದರೂ ಪ್ರತಿಭಟನೆ ಏಕೆ?: ರೈತರಿಗೆ ಸುಪ್ರೀಂ ಚಾಟಿ

ಸಾರಾಂಶ

* ಸರ್ಕಾರ ಮಾತುಕತೆಗೆ ಆಹ್ವಾನಿಸಿದರೂ ಏಕೆ ಹೋಗಲಿಲ್ಲ? * 43 ರೈತ ಸಂಘಟನೆಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ * ಕೃಷಿ ಕಾಯ್ದೆಗೆ ತಡೆ ನೀಡಿದ್ದರೂ ಪ್ರತಿಭಟನೆ ಏಕೆ?: ರೈತರಿಗೆ ಚಾಟಿ

ನವದೆಹಲಿ(ಅ.05): ‘ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು(Farm law) ಈಗಾಗಲೇ ತಡೆ ಹಿಡಿಯಲಾಗಿದೆ. ಆದ​ರೂ ರೈತರು ಪ್ರತಿಭಟನೆ ನಡೆಸುತ್ತಿರುವುದು ಏಕೆ?’ ಎಂದು ಸುಪ್ರೀಂ ಕೋರ್ಟ್‌(Supreme Court) ಖಾರವಾಗಿ ಪ್ರಶ್ನಿಸಿದೆ. ಇದೇ ವೇಳೆ, ಲಖೀಂಪುರದಲ್ಲಿ(Lakhimpur) ನಾಲ್ವರು ರೈತರ ಸಾವಿನ ಬಗ್ಗೆಯೂ ಖೇದ ವ್ಯಕ್ತ​ಪ​ಡಿ​ಸಿ​ರುವ ಕೋರ್ಟ್‌, ‘ಇಂಥ ಸಂದ​ರ್ಭ​ದಲ್ಲಿ ಘಟ​ನೆಯ ಹೊಣೆ​ಯನ್ನು ಯಾರೂ ಹೊರು​ವು​ದಿ​ಲ್ಲ’ ಎಂಬ ಎಚ್ಚ​ರಿ​ಕೆಯ ಮಾತನ್ನು ರೈತ​ರಿಗೆ ಹೇಳಿ​ದೆ.

‘ರೈತರಿಗೆ ಮರಣ ಶಾಸನದಂತಿರುವ 3 ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ(Jantar Mantar) ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು’ ಎಂದು ರೈತ ಸಂಘಟನೆ ಕೋರಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌(Supreme Court) ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ, ‘ಮಾತು​ಕ​ತೆಗೆ ಕರೆ​ದರೂ ರೈತರು ಬರು​ತ್ತಿ​ಲ್ಲ’ ಎಂದು ಹರ್ಯಾಣದ ಸರ್ಕಾರ(Haryana Govt) ವಾದಿ​ಸಿ​ತು.

ಇದೇ ವೇಳೆ, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌ ಅವರು, ‘ಕೃಷಿ ಕಾಯ್ದೆ ವಿಚಾರವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದೆ. ಇಂಥ ಸಂದರ್ಭದಲ್ಲಿ ಯಾರೂ ರಸ್ತೆಗಿಳಿದು ಪ್ರತಿಭಟನೆ ನಡೆಸಬಾರದು. ಈಗ ಲಖೀಂಪು​ರ​ದಲ್ಲಿ(Lakhimpur) ನಡೆದ ದುರ​ದೃ​ಷ್ಟ​ಕರ ಘಟನೆ ನೋಡಿ​ದ್ದೀ​ರಿ’ ಎಂದ​ರು.

ಆಗ ಪ್ರತಿ​ಕ್ರಿ​ಯಿ​ಸಿದ ದ್ವಿಸ​ದಸ್ಯ ಪೀಠ, ‘ಇಂಥ ಘಟನೆ ನಡೆ​ದಾಗ ಯಾರೂ ಹೊಣೆ ಹೊರು​ವುದಿಲ್ಲ’ ಎಂದಿ​ತ​ಲ್ಲದೆ, ‘ಕಾ​ಯ್ದೆಗೆ ಈಗಾ​ಗಲೇ ತಡೆ ನೀಡಿ​ದ್ದೇ​ವೆ. ಈ ಬಗ್ಗೆ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಾದರೂ ಏನಿದೆ?’ ಎಂದು ಪ್ರಶ್ನಿ​ಸಿ​ತು.

ಇನ್ನು ಹರ್ಯಾಣ ಸರ್ಕಾರ ಆಹ್ವಾನಿಸಿದ ಮಾತುಕತೆಗೆ ಏಕೆ ಹೋಗಲಿಲ್ಲ ಎಂಬುದರ ವಿವರಣೆ ನೀಡುವಂತೆ ರಾಕೇಶ್‌ ಟಿಕಾಯತ್‌ ಸೇರಿದಂತೆ 43 ರೈತ ಸಂಘಟನೆಗಳ ಮುಖಂಡರಿಗೆ ಸೂಚಿ​ಸಿತು ಹಾಗೂ ಶುಕ್ರ​ವಾ​ರಕ್ಕೆ ವಿಚಾ​ರಣೆ ಮುಂದೂ​ಡಿ​ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು
ಬಾಡಿಗೆದಾರರ ಮನೆಯಿಂದ ಹೊರಹಾಕಲು ಬಂದ ಮಾಲೀಕನಿಗೆ ಆಘಾತ, ತಾಯಿ-ಇಬ್ಬರು ಮಕ್ಕಳ ಶವಪತ್ತೆ