ಕೃಷಿ ಕಾಯ್ದೆ ಕೈಬಿಡದಿದ್ದರೆ ಸರ್ಕಾರ ಪತನ: ಟಿಕಾಯತ್‌

Published : Feb 04, 2021, 08:33 AM IST
ಕೃಷಿ ಕಾಯ್ದೆ ಕೈಬಿಡದಿದ್ದರೆ ಸರ್ಕಾರ ಪತನ: ಟಿಕಾಯತ್‌

ಸಾರಾಂಶ

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸದಿದ್ದರೆ ಮುಂದೆ ಅಧಿಕಾರದಲ್ಲಿ ಉಳಿಯುವುದು ಕಷ್ಟ|  ಕೃಷಿ ಕಾಯ್ದೆಗಳ ವಾಪಸಿಯನ್ನು ಮಾತ್ರ ಕೇಳುತ್ತಿದ್ದೇವೆ| ದೇಶದ ಯುವಕರು ಕುರ್ಚಿ ವಾಪಸಿ ಕೇಳತೊಡಗಿದರೆ ಏನು ಮಾಡುತ್ತೀರಿ 

ಹರ್ಯಾಣ(ಫೆ.04): ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸದಿದ್ದರೆ ಮುಂದೆ ಅಧಿಕಾರದಲ್ಲಿ ಉಳಿಯುವುದು ಕಷ್ಟವಾಗಬಹುದು. ಈಗ ಕೃಷಿ ಕಾಯ್ದೆಗಳ ವಾಪಸಿಯನ್ನು ಮಾತ್ರ ಕೇಳುತ್ತಿದ್ದೇವೆ. ಮುಂದೆ ದೇಶದ ಯುವಕರು ಕುರ್ಚಿ ವಾಪಸಿ ಕೇಳತೊಡಗಿದರೆ ಏನು ಮಾಡುತ್ತೀರಿ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಹರ್ಯಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ‘ಮಹಾಪಂಚಾಯತ್‌’ ಎಂಬ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಟಿಕಾಯತ್‌, ‘ಸರ್ಕಾರ ಎಚ್ಚರಿಕೆಯಿಂದ ಕೇಳಿಸಿಕೊಳ್ಳಲಿ. ನಾವು ಇಲ್ಲಿಯವರೆಗೆ ಕಾಯ್ದೆ ವಾಪಸಿ ಮಾತ್ರ ಕೇಳಿದ್ದೇವೆ. ಇನ್ನುಮುಂದೆ ಯುವಕರು ಬಂಡೆದ್ದು ಕುರ್ಚಿ ವಾಪಸಿ ಕೇಳತೊಡಗಿದರೆ ಏನಾಗಬಹುದು’ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಸಮಾವೇಶದ ಬೃಹತ್‌ ವೇದಿಕೆ ಜನರ ಭಾರ ತಾಳಿಕೊಳ್ಳಲಾಗದೆ ಕುಸಿದು ಬಿದ್ದಿತು. ವೇದಿಕೆಯ ಮೇಲಿದ್ದ ಯಾರಿಗೂ ಗಾಯವಾಗಲಿಲ್ಲ. ಮುರಿದ ವೇದಿಕೆಯಲ್ಲೇ ಕಾರ್ಯಕ್ರಮ ನಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ