ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ

Published : Apr 06, 2026, 08:41 PM IST
Opinio Poll west bengal

ಸಾರಾಂಶ

ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ, ಪಂಚ ರಾಜ್ಯ ಚುನಾವಣೆ ಕಾವು ಹೆಚ್ಚಾಗಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಚುನಾವಣೆ ಸಮೀಕ್ಷೆಯಲ್ಲಿ ಫಲಿತಾಂಶ ಬಯಲಾಗಿದೆ. 

ನವದೆಹಲಿ (ಏ.04) ಪಂಚ ರಾಜ್ಯ ಚುನಾವಣೆಗಳ ಭರಾಟೆ ಜೋರಾಗಿದೆ. ಕರ್ನಾಟಕದಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ವಿಧಾನಸಭಾ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪೈಕಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪೂರ್ವ ಸಮೀಕ್ಷಾ ಫಲಿತಾಂಶ ಬಹಿರಂಗವಾಗಿದೆ. ಮ್ಯಾಟ್ರಿಜ್ ಹಾಗೂ ಚಾಣಾಕ್ಯ ಎಜೆನ್ಸಿ ಸಮೀಕ್ಷಾ ಫಲಿತಾಂಶ ಬಹಿರಂಗ ಮಾಡಿದೆ.

294 ಸ್ಥಾನ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಬಹುಮತ ಪಡೆದು ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋ ಕುತೂಹಲ ತೀವ್ರಗೊಂಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಂತ್ಯಹಾಡಿ ಮಹತ್ತರ ಬದಲಾವಣೆಗೆ ಬಿಜೆಪಿ ಸಜ್ಜಾಗಿದೆ. ಇದೀಗ ಎರಡು ಎಜೆನ್ಸಿಗಳು ನೀಡಿದ ಸಮೀಕ್ಷಾ ಫಲಿತಾಂಶದಲ್ಲಿ ಜಿದ್ದಾಜಿದ್ದಿ ವ್ಯಕ್ತವಾಗಿದೆ.

ಬಂಗಾಳ ವಿಧಾನಸಭೆ ಚುನಾವಣೆ ಸಮೀಕ್ಷಾ ಫಲಿತಾಂಶ(ಮ್ಯಾಟ್ರಿಜ್)

  • ಟಿಎಂಸಿ: 140 ರಿಂದ 160 ಸ್ಥಾನ
  • ಬಿಜೆಪಿ: 130 ರಿಂದ 150 ಸ್ಥಾನ
  • ಇತರರು: 8 ರಿಂದ 16 ಸ್ಥಾನ

ಬಂಗಾಳ ವಿಧಾನಸಭೆ ಚುನಾವಣೆ ಸಮೀಕ್ಷಾ ಫಲಿತಾಂಶ(ಚಾಣಾಕ್ಯ)

  • ಟಿಎಂಸಿ: 155 ರಿಂದ 160 ಸ್ಥಾನ
  • ಬಿಜೆಪಿ: 110 ರಿಂದ 115 ಸ್ಥಾನ
  • ಇತರರು: 9 ರಿಂದ 14 ಸ್ಥಾನ

ಶೇಕಡಾವಾರು ಮತ (ಮ್ಯಾಟ್ರಿಜ್)

  • ಟಿಎಂಸಿ: 43%
  • ಬಿಜೆಪಿ: 41%
  • ಇತರರು: 16%

ಚುನಾವಣಾ ಫಲಿತಾಂಶದ ಸಮೀಕ್ಷೆಯಲ್ಲಿ ಟಿಎಂಸಿ ಮ್ಯಾಜಿಕ್ ನಂಬರ್ ಪಡೆದಿದೆ. ಮತ್ತೆ ಟಿಎಂಸಿ ಅಧಿಕಾರಕ್ಕೆ ಬರಲಿದೆ ಎಂದಿದೆ. ಆದರೆ ಬಿಜಿಪಿ ಶಕ್ತ ಹೋರಾಟ ನೀಡಿದೆ. ಜಿದ್ದಾಜಿದ್ದಿನ ಹೋರಾಟ ನೀಡಿದೆ. ಹೀಗಾಗಿ ಅಸಲಿ ಫಲಿತಾಂಶದ ವೇಳೆ ಮಹತ್ತರ ಬದಲಾವಣೆ ಆದರೂ ಅಚ್ಚರಿಪಡಬೇಕಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನುಸುಳುಕೋರರಿಗೆ ನಡುಕ ಹುಟ್ಟಿಸಲಿದೆ BSF ಹೊಸ ತಂತ್ರ: ಗಡಿಯಲ್ಲಿ ಇನ್ಮುಂದೆ ಮೊಸಳೆ, ಹಾವುಗಳೇ ಸೆಕ್ಯೂರಿಟಿ!
ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು