ಲಸಿಕೆ ಪಡೆದವರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ!

Published : Jun 19, 2021, 08:38 AM ISTUpdated : Jun 19, 2021, 08:46 AM IST
ಲಸಿಕೆ ಪಡೆದವರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ!

ಸಾರಾಂಶ

* ಲಸಿಕೆ ಪಡೆದವರಿಗೆ ಅಪಾಯ ಕಮ್ಮಿ * ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.80ರಷ್ಟುಕಡಿಮೆ * ಕೇವಲ ಶೇ.8 ಜನರಿಗೆ ಆಕ್ಸಿಜನ್‌ ಅಗತ್ಯ * ಕೊರೋನಾ ವಿರುದ್ಧ ಲಸಿಕೆಯಿಂದ ಶೇ.94ರಷ್ಟು ರಕ್ಷಣೆ

ನವದೆಹಲಿ(ಜೂ.19): ಕೊರೋನಾ ವೈರಸ್‌ ವಿರುದ್ಧ ಲಸಿಕೆಗಳು ಶೇ.94ರಷ್ಟುರಕ್ಷಣೆ ನೀಡಲಿವೆ. ಲಸಿಕೆ ಪಡೆದವರಿಗೆ ಕೊರೋನಾ ಬಂದರೂ ಅವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75ರಿಂದ 80ರಷ್ಟುಕಡಿಮೆ ಎಂಬುದು ಸಾಬೀತಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಶುಕ್ರವಾರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ.ಪೌಲ್‌ ಈ ಮಾಹಿತಿ ನೀಡಿದರು. ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆಯ ಪರಿಣಾಮವನ್ನು ಅಧ್ಯಯನ ನಡೆಸಿದ ವೇಳೆ ಲಸಿಕೆ ಪಡೆದವರ ಪೈಕಿ ಶೇ.8ರಷ್ಟುಮಂದಿಗೆ ಮಾತ್ರ ಆಮ್ಲಜನಕದ ಅಗತ್ಯತೆ ಉಂಟಾಗಬಹುದಾದ ಮತ್ತು ಶೇ.8ರಷ್ಟುಮಂದಿಗೆ ಶೇ.6ರಷ್ಟುಮಂದಿ ಐಸಿಯುಗೆ ದಾಖಲಾಗಬಹುದಾದ ಸಾಧ್ಯತೆ ಕಂಡುಬಂದಿದೆ ಎಂದು ಹೇಳಿದರು.

ಇದೇ ವೇಳೆ, 2ನೇ ಅಲೆಯ ಶೇ.85ರಷ್ಟುಪ್ರಕರಣಗಳು ಮೇ 7ರಂದೇ ತುತ್ತತುದಿಯನ್ನು ತಲುಪಿದ್ದು, ದೈನಂದಿನ ಪ್ರಕರಣಗಳು ಕಳೆದ ವಾರದಲ್ಲಿ ಸರಾಸರಿ ಶೇ.30ರಷ್ಟುಇಳಿಕೆ ಆಗಿದೆ. 513 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಮ್ಮಿ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Keralam Election Results: ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?
5 State Assembly Election results 2026 Live: Keralam Election Results - ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?