ಕಾಡ್ಗಿಚ್ಚು ಆರಿಸಲು ಏಕಾಂಗಿ ಯತ್ನಿಸಿದ ಅರಣ್ಯ ಸಚಿವ!

Published : Apr 07, 2021, 09:53 AM ISTUpdated : Apr 07, 2021, 10:00 AM IST
ಕಾಡ್ಗಿಚ್ಚು ಆರಿಸಲು ಏಕಾಂಗಿ ಯತ್ನಿಸಿದ ಅರಣ್ಯ ಸಚಿವ!

ಸಾರಾಂಶ

1300 ಹೆಕ್ಟೇರ್‌ಗೂ ಹೆಚ್ಚಿನ ಅರಣ್ಯವನ್ನು ಆಹುತಿ ಪಡೆದ ಕಾಡ್ಗಿಚ್ಚು|  ಕಾಡ್ಗಿಚ್ಚನ್ನು ನಂದಿಸಲು ಉತ್ತರಾಖಂಡದ ಅರಣ್ಯ ಸಚಿವರ ಹರಾಕ್‌ಸಿಂಗ್‌ ರಾವತ್‌ ಏಕಾಂಗಿಯಾಗಿ ಯತ್ನ

ಡೆಹ್ರಾಡೂನ್(ಏ.07)‌: 1300 ಹೆಕ್ಟೇರ್‌ಗೂ ಹೆಚ್ಚಿನ ಅರಣ್ಯವನ್ನು ಆಹುತಿಪಡೆದ ಕಾಡ್ಗಿಚ್ಚನ್ನು ನಂದಿಸಲು ಉತ್ತರಾಖಂಡದ ಅರಣ್ಯ ಸಚಿವರ ಹರಾಕ್‌ಸಿಂಗ್‌ ರಾವತ್‌ ಏಕಾಂಗಿಯಾಗಿ ಯತ್ನಿಸಿ ನಗೆಪಾಟಲಿಗೀಡಾದ ಘಟನೆ ನಡೆದಿದೆ.

ಕಳೆದ ಕೆಲ ದಿನಗಳಿಂದ ರಾಜ್ಯದ ಕೆಲ ಅರಣ್ಯ ಭಾಗಗಳು ಭಾರೀ ಕಾಡ್ಗಿಚ್ಚಿಗೆ ತುತ್ತಾಗಿದೆ. ಇದನ್ನು ನಂದಿಸುವ ವೇಳೆ ನಾಲ್ವರು ಅರಣ್ಯ ಸಿಬ್ಬಂದಿ ಕೂಡಾ ಸಾವನ್ನಪ್ಪಿದ್ದಾರೆ. ಇದರ ನಡುವೆಯೇ ಸಚಿವ ಹರಕ್‌ ಭಾನುವಾರ ಅರಣ್ಯಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಛಾಯಾಗ್ರಾಹಕರು ಕಾಣುತ್ತಲೇ ಕೈಯಲ್ಲಿ ಮರದ ಸಣ್ಣ ಟೊಂಗೆ ಹಿಡಿದು ಬೆಂಕಿ ಆರಿಸುವ ಯತ್ನ ಮಾಡಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಚಿವರ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ