ಯೋಗಿ ಸರ್ಕಾರದಲ್ಲಿ ಮದ್ಯದಿಂದ ದಾಖಲೆಯ ಗಳಿಕೆ, ಆದಾಯದಲ್ಲಿ ಭಾರಿ ಏರಿಕೆ!

Published : Apr 03, 2022, 12:06 PM IST
ಯೋಗಿ ಸರ್ಕಾರದಲ್ಲಿ ಮದ್ಯದಿಂದ ದಾಖಲೆಯ ಗಳಿಕೆ, ಆದಾಯದಲ್ಲಿ ಭಾರಿ ಏರಿಕೆ!

ಸಾರಾಂಶ

* ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಮದ್ಯದಿಂದ ಸಾಕಷ್ಟು ಆದಾಯ ಗಳಿಸುತ್ತಿದೆ * ಸರ್ಕಾರವು ಮದ್ಯದಿಂದ ಪಡೆದ ಆದಾಯದಲ್ಲಿ ಶೇ. 20.45 ರಷ್ಟು ಜಿಗಿತವನ್ನು ಕಂಡಿದೆ * ಅಬಕಾರಿ ಇಲಾಖೆಯಿಂದ ಈ ಮಾಹಿತಿ ಲಭಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ

ಲಕ್ನೋ(ಏ.03): ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಮದ್ಯದಿಂದ ಸಾಕಷ್ಟು ಆದಾಯ ಗಳಿಸುತ್ತಿದೆ. 2021-22ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರವು ಮದ್ಯದಿಂದ ಪಡೆದ ಆದಾಯದಲ್ಲಿ ಶೇ. 20.45 ರಷ್ಟು ಜಿಗಿತವನ್ನು ಕಂಡಿದೆ. ಅಬಕಾರಿ ಇಲಾಖೆಯಿಂದ ಈ ಮಾಹಿತಿ ಲಭಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ. 2021-22 ರ ಹಣಕಾಸು ವರ್ಷದಲ್ಲಿ, ಉತ್ತರ ಪ್ರದೇಶ ಸರ್ಕಾರವು ಮದ್ಯದ ಅಂಗಡಿಗಳ ಮೇಲೆ ವಿಧಿಸಲಾದ ಪರವಾನಗಿ ಶುಲ್ಕ ಮತ್ತು ಅಬಕಾರಿ ತೆರಿಗೆಯಿಂದ ಒಟ್ಟು 36,208.44 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ಹೇಳಲಾಗಿದೆ. ಈ ಹಿಂದೆ ಈ ಆದಾಯ 30,061.44 ಕೋಟಿ ಆಗಿತ್ತು.

ಗಮನಾರ್ಹ ಅಂಶವೆಂದರೆ, ಮದ್ಯದಂಗಡಿಗಳಿಂದ ಸರಕಾರಕ್ಕೆ ವಾರ್ಷಿಕ ಕೋಟಿಗಟ್ಟಲೆ ಆದಾಯ ಬರುತ್ತಿದೆ. ಹೊರಬಿದ್ದಿರುವ ಅಂಕಿ ಅಂಶಗಳಿಂದ ಈ ವಿಷಯ ಇನ್ನಷ್ಟು ಸ್ಪಷ್ಟವಾಗಿದೆ. ನಿಸ್ಸಂಶಯವಾಗಿ, ಈ ಅಂಕಿಅಂಶಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ಕಾಣಬಹುದು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಮತ್ತು ಅಬಕಾರಿ ಆಯುಕ್ತ ಸೆಂಥಿಲ್ ಪಾಂಡಿಯನ್ ಅವರು ಪಾರದರ್ಶಕ ನೀತಿ ಮತ್ತು ನಿರಂತರ ಮೇಲ್ವಿಚಾರಣೆಯ ಫಲಿತಾಂಶವಾಗಿದೆ ಎಂದು ಬಣ್ಣಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ 2,076 ಹೊಸ ಅಂಗಡಿಗಳು ಪರವಾನಗಿ ಪಡೆದಿವೆ

ಅಬಕಾರಿ ಇಲಾಖೆಯಿಂದ ಮಾಹಿತಿ ನೀಡಿ, ನಾಲ್ಕು ವರ್ಷಗಳಲ್ಲಿ ಹಲವು ಹೊಸ ಅಂಗಡಿಗಳಿಗೆ ಸರ್ಕಾರದಿಂದ ಪರವಾನಗಿ ನೀಡಲಾಗಿದೆ ಎಂದು ತಿಳಿಸಿದರು. ಹಣಕಾಸು ವರ್ಷದ 2017-18 ರಿಂದ 2020-21 ರ ನಡುವೆ 2076 ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಈ ಪರವಾನಗಿಗಳನ್ನು ನಾಲ್ಕು ವಿಭಿನ್ನ ರೀತಿಯ ಚಿಲ್ಲರೆ ಮಾರಾಟ ಮಳಿಗೆಗಳಿಗೆ ನೀಡಲಾಗಿದೆ. ಇದರಲ್ಲಿ ದೇಶದ ಮದ್ಯ, ವಿದೇಶಿ ಮದ್ಯ, ಮಾದರಿ ಅಂಗಡಿ ಮತ್ತು ಬಿಯರ್ ಶಾಪ್ ಸೇರಿದೆ.

ಅಬಕಾರಿ ಇಲಾಖೆ ಗರಿಷ್ಠ ಆದಾಯ ನೀಡುತ್ತದೆ

ಅಬಕಾರಿ ಇಲಾಖೆಯಿಂದ ಸರಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. 2021ರ ಮಾರ್ಚ್‌ನಲ್ಲಿ ಮದ್ಯದ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ ಎಂದು ತಿಳಿದು ಬಂದಿದೆ. ಆ ಸಮಯದಲ್ಲಿ, ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ, ಅದರ ಮೇಲೆ ಕೋವಿಡ್ ಸೆಸ್ ವಿಧಿಸಲಾಯಿತು. ಈ ಕಾರಣಕ್ಕೆ ಮದ್ಯ 10 ರೂ.ನಿಂದ 40 ರೂ.ಗೆ ಏರಿಕೆಯಾಗಿತ್ತು. ಮತ್ತೊಂದೆಡೆ, ಅಬಕಾರಿ ಮತ್ತು ಕಬ್ಬು-ಸಕ್ಕರೆ ಉದ್ಯಮದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಪ್ರಕಾರ, ನಾವು 36000 ಕೋಟಿ ರೂ.ಗಿಂತ ಹೆಚ್ಚಿನ ಬದ್ಧತೆಯನ್ನು ಹೊಂದಿದ್ದೇವೆ. ಸತತ 3 ಕೋವಿಡ್ ಾಲೆ ಮತ್ತು ಲಾಕ್‌ಡೌನ್ ಮತ್ತು ಲಘು ಕರ್ಫ್ಯೂ ನಡುವೆಯೂ ಈ ಗುರಿಯನ್ನು ಸಾಧಿಸಲಾಗಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..