ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!

Published : May 20, 2020, 09:05 AM IST
ಗಾಯಾಳು ವಲಸೆ  ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!

ಸಾರಾಂಶ

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!| ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಕಾರ್ಮಿಕರ ಸಾಗಣೆ| ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಛೀಮಾರಿ

ಲಕ್ನೋ(ಮೇ.20):  ಭೀಕರ ಅಪಘಾತದಲ್ಲಿ ಗಾಯಗೊಂಡ ವಲಸೆ ಕಾರ್ಮಿಕರನ್ನು ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಸಾಗಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಔರಯಾದಲ್ಲಿ ಶನಿವಾರ ಎರಡು ಟ್ರಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 26 ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 30 ಜನರು ಗಾಯಗೊಂಡಿದ್ದರು. ಮರುದಿನ ಈ ದುರ್ಘಟನೆಯಲ್ಲಿ ಗಾಯಗೊಂಡ ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರನ್ನು ಶವಗಳೊಟ್ಟಿಗೇ 3 ಟ್ರಕ್‌ಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಸಾಗಿಸಿದೆ.

ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದ್ದು, ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಜನರು ಛೀಮಾರಿ ಹಾಕಿದ್ದಾರೆ.

ಅಲ್ಲದೆ ‘ಇದು ಮೃತರು ಮತ್ತು ಗಾಯಗೊಂಡವರಿಗೆ ಮಾಡುತ್ತಿರುವ ಅವಮಾನ. ಜಾರ್ಖಂಡ್‌ ಗಡಿಯವರೆಗೆ ಸೂಕ್ತ ವಾಹನದಲ್ಲಿ ವಲಸಿಗರನ್ನು ರವಾನಿಸಿ’ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ಪ್ರಯಾಗ್‌ರಾಜ್‌ ಹೆದ್ದಾರಿ ಬಳಿ ಟ್ರಕ್‌ಗಳನ್ನು ತಡೆದು ಮೃತದೇಹಗಳನ್ನು ಆ್ಯಂಬುಲೆನ್ಸ್‌ನಲ್ಲಿ ತುಂಬಿ ಕಳುಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಸಿಇಒ ವಜಾಕ್ಕೆ ಕೇಂದ್ರ ಸೂಚನೆ ಸಾಧ್ಯತೆ
ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ