UP Elections: ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಚಾರಕ್ಕೆ ನಿಷೇಧ, ಚುನಾವಣಾ ಆಯೋಗದ ಮಹತ್ವದ ಕ್ರಮ!

Published : Feb 26, 2022, 06:05 PM IST
UP Elections: ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಚಾರಕ್ಕೆ ನಿಷೇಧ, ಚುನಾವಣಾ ಆಯೋಗದ ಮಹತ್ವದ ಕ್ರಮ!

ಸಾರಾಂಶ

* ವಾರಣಾಸಿಯ ಪಿಂದ್ರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈಗೆ ಸಂಕಷ್ಟ * ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಪ್ರಚಾರಕ್ಕೆ ನಿಷೇಧ, ಚುನಾವಣಾ ಆಯೋಗದ ಮಹತ್ವದ ಕ್ರಮ * ಫೆಬ್ರವರಿ 26 ರಂದು ಬೆಳಿಗ್ಗೆ 8 ರಿಂದ ಮುಂದಿನ 24 ಗಂಟೆಗಳ ಕಾಲ ಪ್ರಚಾರಕ್ಕೆ ಬ್ರೇಕ್

ಲಕ್ನೋ(ಫೆ.26): ವಾರಣಾಸಿಯ ಪಿಂದ್ರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರಿಗೆ 24 ಗಂಟೆಗಳ ಕಾಲ ಪ್ರಚಾರದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಫೆಬ್ರವರಿ 26 ರಂದು ಬೆಳಿಗ್ಗೆ 8 ರಿಂದ ಮುಂದಿನ 24 ಗಂಟೆಗಳ ಕಾಲ ಅವರು ಚುನಾವಣಾ ರ್ಯಾಲಿಗಳು, ಸಭೆಗಳು, ಸಾರ್ವಜನಿಕ ಸಂಪರ್ಕಗಳು, ರೋಡ್‌ಶೋಗಳು, ಸಂದರ್ಶನಗಳು ಇತ್ಯಾದಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಪ್ರಧಾನಿ-ಸಿಎಂ ವಿರುದ್ಧ ಅಸಭ್ಯ ಟೀಕೆ ಮಾಡಿದ್ದಕ್ಕಾಗಿ ಆಯೋಗ ಈ ಕ್ರಮ ಕೈಗೊಂಡಿದೆ.

ಪಿಂದ್ರಾ ಪ್ರದೇಶದಲ್ಲಿ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮತ್ತು ಸಿಎಂ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ದೂರಿನ ಕುರಿತು ಪಿಂದ್ರಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಭ್ಯರ್ಥಿ ಅಜಯ್ ರೈ ಅವರಿಂದ ಸ್ಪಷ್ಟನೆ ಕೇಳಿದ್ದರು. ಹೇಳಿಕೆ ಮತ್ತು ವಿಡಿಯೋ ಇತ್ಯಾದಿಗಳ ತನಿಖೆಯ ಆಧಾರದ ಮೇಲೆ ಚುನಾವಣಾಧಿಕಾರಿ ಅಜಯ್ ರೈ ವಿರುದ್ಧ ಫುಲ್ಪುರ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳು ತನಿಖಾ ವರದಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸಿದ್ದರು. ಮುಖ್ಯ ಚುನಾವಣಾಧಿಕಾರಿ ದೆಹಲಿಯ ಚುನಾವಣಾ ಆಯೋಗಕ್ಕೆ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಫೆಬ್ರವರಿ 23 ರಂದು ಚುನಾವಣಾ ಆಯೋಗವು ಅಜಯ್ ರೈ ಅವರಿಗೆ ನೋಟಿಸ್ ಜಾರಿ ಮಾಡಿತು ಮತ್ತು ಅವರ ಉತ್ತರವನ್ನು ಕೇಳಿತು. ಅಜಯ್ ರೈ ಉತ್ತರ ಕಳುಹಿಸಿದ್ದಾರೆ. ಗುರುವಾರ, ಆಯೋಗವು ಅಜಯ್ ರೈ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು 24 ಗಂಟೆಗಳ ಕಾಲ ಚುನಾವಣಾ ಚಟುವಟಿಕೆಗಳಿಂದ ನಿಷೇಧಿಸಲು ಆದೇಶಿಸಿದೆ.

ಅಜಯ್ ರೈ ಕೊಟ್ಟ ಹೇಳಿಕೆ

ಫೆಬ್ರವರಿ 3 ರಂದು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅಜಯ್ ರೈ ಪ್ರಕಾರ, ಮಾರ್ಚ್ 7 ರ ನಂತರ ದೇಶಕ್ಕೆ ಯೋಗಿ-ಮೋದಿ ಅಲ್ಲ, ಆದರೆ ಪಡಿತರ ಅಂಗಡಿಗಳಲ್ಲಿ ಸಿಗುವ ಕೆಟ್ಟ ಉಪ್ಪನ್ನು ಮಣ್ಣಿನಲ್ಲಿ ಬೆರೆಸಿ ಎಂದು ಹೇಳಿದ್ದರು. ಅಜಯ್ ರೈ ಕಾಂಗ್ರೆಸ್ ನಿಂದ ಪಿಂದ್ರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬುವುದು ಉಲ್ಲೇಖನೀಯ, 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!