
ಲಕ್ನೋ(ಏ.30): ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕೊರೋನಾದಿಂದ ಗುಣಮುಖರಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ಹಾಗೆಯೇ ಕೊರೋನಾ ನಿರ್ವಹಣೆ ರಚಿಸಲಾಗಿದ್ದ ಟೀಮ್-11ನ್ನು ವಿಸರ್ಜಿಸಿದ್ದಾರೆ.
ಟೀಮ್ 11 ಕೊರೋನಾ ಸಮಸ್ಯೆ ನಿಭಾಯಿಸಲು ಅಸಮರ್ಥವಾಗಿದ್ದು ಸಾಂಕ್ರಾಮಿಕ ರೋಗದಲ್ಲಿ ಜನರಿಗೆ ಪರಿಹಾರವನ್ನು ಒದಗಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಸರ್ಕಾರದ ವಕ್ತಾರರ ಪ್ರಕಾರ, ಮುಖ್ಯಮಂತ್ರಿ ಈಗ ವೈದ್ಯಕೀಯ ತಂಡ ಸಚಿವ ಸುರೇಶ್ ಖನ್ನಾ ಮತ್ತು ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ನೇತೃತ್ವದಲ್ಲಿ 'ತಂಡ 9' ರಚಿಸಿದ್ದಾರೆ.
ಭಾರತಕ್ಕೆ ಬಂತು ಅಮೆರಿಕ ಪರಿಹಾರ, ಕಿಚ್ಚ ಫ್ಯಾನ್ಸ್ಗೆ ಸಂತಸದ ವಿಚಾರ; ಏ.30ರ ಟಾಪ್ 10 ಸುದ್ದಿ!
ಸಾಮಾನ್ಯ ಜನರಿಗೆ ಅಗತ್ಯವಾದ ಪರಿಹಾರವನ್ನು ಒದಗಿಸಲು ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮ ರೀತಿಯಲ್ಲಿ ನಿಭಾಯಿಸುವುದು ಹೊಸ ಸಮಿತಿಯು ಜವಾಬ್ದಾರಿಯಾಗಿದೆ. ನಂತರ ಮುಖ್ಯಮಂತ್ರಿ ಲಕ್ನೋದಲ್ಲಿ ನಿರ್ಮಾಣ ಹಂತದಲ್ಲಿದ್ದ ಡಿಆರ್ಡಿಒ ಆಸ್ಪತ್ರೆಯನ್ನು ಪರೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ