ದಾಳಿಯಲ್ಲಿ 280 ಕೋಟಿಗೂ ಹೆಚ್ಚು ಮೌಲ್ಯದ ನಗದು ಪತ್ತೆ, ಓಡ್ಸೋದು ಮಾತ್ರ ಹಳೇ ಸ್ಕೂಟರ್!

Published : Dec 27, 2021, 07:48 PM IST
ದಾಳಿಯಲ್ಲಿ 280 ಕೋಟಿಗೂ ಹೆಚ್ಚು ಮೌಲ್ಯದ ನಗದು ಪತ್ತೆ, ಓಡ್ಸೋದು ಮಾತ್ರ ಹಳೇ ಸ್ಕೂಟರ್!

ಸಾರಾಂಶ

* ಕನೌಜ್‌ನ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಮೇಲೆ ಐಟಿ ದಾಳಿ * ಐಟಿ ದಾಳಿ ವೇಳೆ  280 ಕೋಟಿಗೂ ಹೆಚ್ಚು ಮೌಲ್ಯದ ನಗದು ಪತ್ತೆ * ಕೋಟಿ ಕೋಟಿ ಮೌಲ್ಯದ ಆಸ್ತಿ ಇದ್ದರೂ ಹಳೇ ಸ್ಕೂಟರ್‌ ಚಲಾಯಿಸುತ್ತಿದ್ದ ಉದ್ಯಮಿ

ಕನೌಜ್‌(ಡಿ.27): ಕನೌಜ್‌ನ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರಿಂದ ವಸೂಲಿಯಾದ ಆಸ್ತಿ ಮತ್ತು ನಗದು ನಿರಂತರವಾಗಿ ಹೆಚ್ಚುತ್ತಿದೆ. ಮೂಲಗಳ ಪ್ರಕಾರ, ಇದುವರೆಗೆ 280 ಕೋಟಿಗೂ ಹೆಚ್ಚು ಮೌಲ್ಯದ ನಗದು ಪತ್ತೆಯಾಗಿದೆ. ಕಾನ್ಪುರದ ನಂತರ, ಕನೌಜ್‌ನಲ್ಲಿರುವ ಪಿಯೂಷ್ ಜೈನ್ ಅವರ ಮನೆಯ ಮೇಲೆ ದಾಳಿ ನಡೆಯುತ್ತಿದೆ. ಮಾಹಿತಿ ಪ್ರಕಾರ ಇದುವರೆಗೆ 200 ಕೋಟಿ ರೂಪಾಯಿಗೂ ಹೆಚ್ಚು ಹಣ ವಸೂಲಿಯಾಗಿದೆ. ಹಣವನ್ನು ಎಣಿಸಲು ಎಸ್‌ಬಿಐ ಅಧಿಕಾರಿಗಳನ್ನು ಕರೆಸಲಾಯಿತು. ಚಿನ್ನ ಮತ್ತು ಬೆಳ್ಳಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ.

ಮೂಲಗಳ ಪ್ರಕಾರ, ಪಿಯೂಷ್ ಜೈನ್ ಅವರು ಜಿಎಸ್‌ಟಿ ಅಧಿಕಾರಿಗಳಿಗೆ ತಿಳಿಸಿದರು, ವರ್ಷಗಳಲ್ಲಿ ಅವರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದ್ದರಿಂದ ಪೂರ್ವಜರ ಚಿನ್ನವನ್ನು ಮಾರಾಟ ಮಾಡುವ ಮೂಲಕ ನಗದು ಸಂಗ್ರಹಿಸಿದ್ದರು. ಆದರೆ, ಚಿನ್ನ ಮಾರಾಟ ಮಾಡಿದವರ ಬಗ್ಗೆ ಪಿಯೂಷ್ ಜೈನ್ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಪಿಯೂಷ್ ಪುತ್ರರಿಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಪಿಯೂಷ್ ಜೈನ್ ಯಾರು?

ಪಿಯೂಷ್ ಜೈನ್ ಮೂಲತಃ ಕನೌಜ್‌ನ ಚುಪ್ಪಟ್ಟಿ ಪ್ರದೇಶದ ನಿವಾಸಿ. ಅವರು ಈಗಲೂ ಕನೌಜ್‌ನಲ್ಲಿ ತಮ್ಮ ಹಳೆಯ ಸ್ಕೂಟರ್‌ನಲ್ಲಿ ಓಡಿಸುತ್ತಾರೆ. ಅವರ ಕನೌಜ್ ಮನೆಯಲ್ಲಿ ಹಳೆಯ ಕ್ವಾಲಿಸ್ ಮತ್ತು ಮಾರುತಿ ಕಾರು ಇದೆ. ಹೀಗಿದ್ದರೂ ತೀರಾ ಸಾಮಾನ್ಯ ಮನುಷ್ಯನಂತೆ ವಾಸಿಸುತ್ತಾರೆ ಮತ್ತು ಪ್ರದೇಶದಲ್ಲಿ ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ. ಜನರ ಪ್ರಕಾರ, ಪಿಯೂಷ್ ತಂದೆ ಮಹೇಶ್ ಚಂದ್ರ ಜೈನ್ ವೃತ್ತಿಯಲ್ಲಿ ರಸಾಯನಶಾಸ್ತ್ರಜ್ಞ. ಅವರ ಮಕ್ಕಳಾದ ಪಿಯೂಷ್ ಮತ್ತು ಅಂಬರೀಶ್ ಅವರು ಸುಗಂಧ ದ್ರವ್ಯಗಳು ಮತ್ತು ಆಹಾರ ಪದಾರ್ಥಗಳಲ್ಲಿ ಬಳಸುವ ಎಸೆನ್ಸ್ ಅನ್ನು ಹೇಗೆ ಮಾಡಬೇಕೆಂದು ಕಲಿತರು.

15 ವರ್ಷಗಳಲ್ಲಿ ವೇಗವಾಗಿ ವಿಸ್ತರಿಸಿದ ವ್ಯಾಪಾರ

ಕಳೆದ 15 ವರ್ಷಗಳಲ್ಲಿ, ಪಿಯೂಷ್ ತಮ್ಮ ವ್ಯವಹಾರವನ್ನು ವೇಗವಾಗಿ ವಿಸ್ತರಿಸಿದ್ದಾರೆ. ಈಗ ಅವರು ಕಾನ್ಪುರದಿಂದ ಮುಂಬೈ ಮತ್ತು ಗುಜರಾತ್‌ನಲ್ಲಿ ವ್ಯಾಪಾರ ಹೊಂದಿದ್ದಾರೆ. ವ್ಯಾಪಾರ ಬೆಳೆದಾಗ, ಪಿಯೂಷ್ ಹತ್ತಿರದ 2 ಮನೆಗಳನ್ನು ಖರೀದಿಸಿ ತನ್ನ ಐಷಾರಾಮಿ ಮನೆಯನ್ನು ನಿರ್ಮಿಸಿದ್ದಾರೆ. ಸುಮಾರು 700 ಚದರ ಗಜ ವಿಸ್ತೀರ್ಣದ ಮನೆಯಲ್ಲಿ ಬಾಲ್ಕನಿ ಬಿಟ್ಟರೆ ಬೇರೆ ಮನೆಗಳಿಗೆ ಏನೂ ಕಾಣಿಸದ ರೀತಿಯಲ್ಲಿ ಪಿಯೂಷ್ ಅವರ ಮನೆ ನಿರ್ಮಾಣವಾಗಿದೆ. ಆದರೆ, ಪಿಯೂಷ್ ಅವರ ತಂದೆ ಮಹೇಶ್ ಚಂದ್ರ ಜೈನ್ ಮತ್ತು ಅವರ ಸಿಬ್ಬಂದಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪಿಯೂಷ್ ಮತ್ತು ಅವರ ಸಹೋದರ ಅಂಬರೀಶ್ ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಪಿಯೂಷ್ ಮತ್ತು ಅಂಬರೀಶ್ ದಂಪತಿಗೆ 6 ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ. ಎಲ್ಲರೂ ಕಾನ್ಪುರದಲ್ಲಿ ಓದುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!