ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

By Suvarna NewsFirst Published Jan 28, 2020, 1:04 PM IST
Highlights

ಸಿಎಎ ವಿರೋಧಿಗಳಿಗೆ ಗುಂಡಿಕ್ಕಿ ಎಂದ ಕೇಂದ್ರ ಸಚಿವ| ‘ಮೋದಿ ಸರ್ಕಾರವನ್ನು ವಿರೋಧಿಸುವರು ದೇಶದ್ರೋಹಿಗಳು’| ಸಭಿಕರ ಬಾಯಲ್ಲಿ ‘ಗುಂಡಿಕ್ಕಿ ಸಾಯಿಸಿ’ ಎಂದು ಹೇಳಿಸಿದ ಅನುರಾಗ್ ಠಾಕೂರ್| ಅನುರಾಗ್ ಠಾಕೂರ್ ಹೇಳಿಕೆಯನ್ನು ವಿರೋಧಿಸಿದ ವಿಪಕ್ಷ| 

ನವದೆಹಲಿ(ಜ.28): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಗೋಲಿ ಮಾರೋ(ಗುಂಡು ಹೊಡೆಯಿರಿ) ಎಂದು ಕೇಂದ್ರ ಸಚಿವ ಅನುರಾಗ್ ಠಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಠಾಕೂರ್, ಸಿಎಎ ವಿರೋಧಿ ಹೋರಾಟಗಾರರಿಗೆ ಗುಂಡಿಕ್ಕಿ ಸಾಯಿಸಬೇಕು ಎಂದು ಗುಡುಗಿದ್ದಾರೆ. 

Shocking: It was a local BJP leader from Delhi back then, its now a front line BJP leader and MoS Finance, Anurag Thakur who is leading the crowd to chant “Desh ke gaddaron ko, Goli maro salon ko”.

Such is the level of politics, ladies and gentlemen! pic.twitter.com/rXZ8M8m6lz

— Prashant Kumar (@scribe_prashant)

ನೆರೆದಿದ್ದ ಸಭಿಕರಿಗೆ ದೇಶದ್ರೋಹಿಗಳನ್ನು ಗುಂಡಿಕ್ಕಿ ಸಾಯಿಸಬೇಕು ಎಂದು ಘೋಷಣೆ ಕೂಗಲು ಹೇಳಿದ  ಠಾಕೂರ್, ಇದೇ ಘೋಷಣೆಯನ್ನು ಹಲವು ಬಾರಿ ಪುನರಾವರ್ತಿಸಿದರು.

ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸುವವರು ದೇಶ ದ್ರೋಹಿಗಳು ಎಂದ ಅನುರಾಗ್ ಠಾಕೂರ್, ಸಿಎಎ ವಿರೋಧಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡಿಕ್ಕಬೇಕು ಎಂದು ಆಗ್ರಹಿಸಿದರು.

CAA ವಿರೋಧಿ ಘೋಷಣೆ: ಶಾ ಎದುರೇ ವಿದ್ಯಾರ್ಥಿ ಥಳಿಸಿದ ಬಿಜೆಪಿ ಕಾರ್ಯಕರ್ತರು!

ಇನ್ನು ಅನುರಾಗ್ ಠಾಕೂರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷಗಳು, ಪ್ರಧಾನಿ ಮೋದಿ ಸರ್ಕಾರದ ಮನದಾಳದ ಮಾತನ್ನು ಅನುರಾಗ್ ಠಾಕೂರ್ ಪುನರುಚ್ಛಿಸಿದ್ದಾರೆ ಎಂದು ಹರಿಹಾಯ್ದಿವೆ.

Delhi CEO has sought a report from the returning officer of Delhi's Rithala constituency over Union Minister and BJP MP Anurag Thakur’s speech at an election rally yesterday. (file pic) pic.twitter.com/lr5a0zWyM9

— ANI (@ANI)

ಇನ್ನು ಅನುರಾಗ್ ಠಾಕೂರ್ ಹೇಳಿಕೆಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಈ ಕುರಿತು ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ದೆಹಲಿ ಚುನಾವಣಾ ಆಯೋಗವನ್ನು ಕೋರಿದೆ.

click me!