ಭರವಸೆಯ ಆಶಾಕಿರಣ, ಲಸಿಕೆ ಅಭಿಯಾನ ಆರಂಭದ ಬೆನ್ನಲ್ಲೇ ಮರಳು ಶಿಲ್ಪಿಯ ಸಂದೇಶ!

Published : Jan 16, 2021, 01:21 PM IST
ಭರವಸೆಯ ಆಶಾಕಿರಣ, ಲಸಿಕೆ ಅಭಿಯಾನ ಆರಂಭದ ಬೆನ್ನಲ್ಲೇ ಮರಳು ಶಿಲ್ಪಿಯ ಸಂದೇಶ!

ಸಾರಾಂಶ

ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭ| ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿ ವೈರಲ್| ಲಸಿಕೆ ಅಭಿಯಾನ ಜೊತೆ ವಿಶೇಷ ಸಂದೇಶ

ಪುಣೆ(ಜ.16): ಪುರಿ ಸಮುದ್ರ ತೀರದಲ್ಲಿ ಕೊರೋನಾ ಲಸಿಕೆಗೆ ವಿಶೇಷ ಸ್ವಾಗತ| ಲಸಿಕೆ ಅಭಿಯಾನಕ್ಕೆ ಶುಭ ಕೋರಿದ ಮರಳು ಶಿಲ್ಪಿ| ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಕಲಾಕೃತಿ ವೈರಲ್

ಶನಿವಾರ ಬೆಳಗ್ಗೆ ಇಡೀ ದೇಶವೇ ಜಗತ್ತಿನ ಅತಿದೊಡ್ಡ ಕೊರೋನಾ ಲಸಿಕೆ ವಿತರಣೆ ಆಂದೋಲನಕ್ಕೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ಇತ್ತ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಟ್ವಿಟರ್‌ನಲ್ಲಿ ಮಹತ್ವದ ಸಂದೇಶವೊಂದನ್ನು ನೀಡುತ್ತಾ ತಮ್ಮ ಕಲಾಕೃತಿಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದು ಭಾರೀ ವೈರಲ್ ಆಗಿದೆ.

ಪಟ್ನಾಯಕ್ ತಯಾರಿಸಿರುವ ಈ ಮರಳು ಶಿಲ್ಪದಲ್ಲಿ ಒಂದು ಬದಿಯಲ್ಲಿ ಕೊರೋನಾ ಅಟ್ಟಹಾಸವಿರುವ ಭಾರತದ ನಕ್ಷೆ ಇದ್ದರೆ, ಅದರ ಪಕ್ಕದಲ್ಲಿ ಕೊರೋನಾ ವ್ಯಾಕ್ಸಿನ್ ಎಂದು ಬರೆದ ಬೃಹತ್ ಸಿರಿಂಜ್ ನಿರ್ಮಿಸಿದ್ದಾರೆ. ಇದರೊಂದಿಗೆ 'ಕೊರೋನಾ ಲಸಿಕೆಗೆ ಸ್ವಾಗತ. ಒಗ್ಗಟ್ಟಿನಿಂದ ನಾವು ಗೆಲ್ಲಬಹುದು' ಎಂಬ ಸಂದೇಶವನ್ನೂ ನೀಡಿದ್ದಾರೆ.

ಪುರಿ ಸಮುದ್ರ ತೀರದಲ್ಲಿ ತಾನು ನಿರ್ಮಿಸಿದ ಈ ಕಲಾಕೃತಿಯ ಫೋಟೋ ಟ್ವೀಟ್ ಮಾಡಿರುವ ಸುದರ್ಶನ್ ಪಟ್ನಾಯಯಕ್ ಹೊಸ ಭರವಸೆಯೊಂದಿಗೆ ವಿಶ್ವದ ಅತಿದೊಡ್ಡ ಕೊರೋನಾ ಲಸಿಕೆ ಅಭಿಯಾನ ಭಾರತದಲ್ಲಿ ನಾಳೆ ಆರಂಭವಾಗಲಿದೆ. ಹೀಗಿರುವಾಗ ಕೊರೋನಾ ಲಸಿಕೆ ಸ್ವಾಗತಿಸಿ ನಾನು ನಿರ್ಮಿಸಿದ ಮರಳು ಶಿಲ್ಪ ಎಂದು ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು
22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ