ಚಿಲ್ಲರೆ ಸಮಸ್ಯೆ, ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ!

Published : Feb 28, 2020, 01:42 PM ISTUpdated : Feb 28, 2020, 01:43 PM IST
ಚಿಲ್ಲರೆ ಸಮಸ್ಯೆ, ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ!

ಸಾರಾಂಶ

ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ|  ದೇವಸ್ಥಾನದ ಮುಂಭಾಗದಲ್ಲಿ ವ್ಯಾಪಾರಸ್ಥರಿಗೆ ನೀಡಲು ಪ್ಲಾನ್

ತಿರುಪತಿ[ಫೆ.28]: ತಿರುಪತಿ ತಿಮ್ಮಪ್ಪ ಮಂದಿರದ ಖಜಾನೆಯಲ್ಲಿ ಸಂಗ್ರಹವಾಗುವ ಚಿಲ್ಲರೆ ಹಣದ ವಿಲೇವಾರಿ ಸಮಸ್ಯೆ ನಿವಾರಣೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹೊಸ ಉಪಾಯ ಕಂಡುಕೊಂಡಿದೆ.

ಈ ಪ್ರಕಾರ, ದೇವಸ್ಥಾನದಲ್ಲಿ ಭಕ್ತಾದಿಗಳು ನೀಡುವ ಚಿಲ್ಲರೆ ದೇಣಿಗೆಯ ಹಣವನ್ನು ಕ್ರಮವಾಗಿ 500 ರು., 200 ರು., 100 ರು. ಹಾಗೂ 50 ರು. ಪೊಟ್ಟಣಗಳನ್ನು ಕಟ್ಟಿಅವುಗಳನ್ನು ದೇವಸ್ಥಾನದ ಮುಂಭಾಗದಲ್ಲಿ ವ್ಯಾಪಾರಸ್ಥರಿಗೆ ನೀಡಲು ಮುಂದಾಗಿದೆ. ಇದಕ್ಕೆ ಬದಲಿಯಾಗಿ ವ್ಯಾಪಾರಸ್ತರಿಂದ ದೇವಸ್ಥಾನವು ಅಷ್ಟೇ ಮೌಲ್ಯದ ಹಣವನ್ನು ಪಡೆಯಲಿದೆ.

ಬರಿಗಾಲಲ್ಲಿ ತಿಮ್ಮಪ್ಪನ ಬೆಟ್ಟ ಹತ್ತಿದ ಧಡಕ್ ಚೆಲುವೆ..!

ಅಲ್ಲದೆ, ವ್ಯಾಪಾರ-ವಹಿವಾಟಿನ ಸಂದರ್ಭದಲ್ಲಿ ಅಗತ್ಯವಿದ್ದಾಗ ವ್ಯಾಪಾರಿಗಳು ಈ ಹಣದ ಪೊಟ್ಟಣಗಳನ್ನು ಭಕ್ತಾದಿಗಳಿಗೆ ಚಿಲ್ಲರೆಯಾಗಿ ನೀಡಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!