Bipin Rawat Chopper Crash: ಇನ್ನೂ ಪತ್ತೆಯಾಗಿಲ್ಲ Black Box: ದುರಂತ ಇನ್ನೂ ನಿಗೂಢ!

By Suvarna NewsFirst Published Dec 9, 2021, 10:46 AM IST
Highlights

* ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ

* ಹೆಲಿಕಾಪ್ಟರ್‌ನಲ್ಲಿದ್ದ ಹದಿಮೂರು ಮಂದಿ ನಿಧನ

* ದುರಂತಕ್ಕೇನು ಕಾರಣ, ಇನ್ನೂ ತಿಳಿದಿಲ್ಲ ಕಾರಣ

* ಹೆಲಿಕಾಪ್ಟರ್‌ನಲ್ಲಿದ್ದ ಬ್ಲಾಕ್‌ ಬಾಕ್ಸ್‌ ಕೂಡಾ ಸಿಕ್ಕಿಲ್ಲ

ನವದೆಹಲಿ(ಡಿ.09): ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಹಲವಾರು ಬಗೆಹರಿಯದ ಪ್ರಶ್ನೆಗಳಿವೆ, ಅದನ್ನು ಸೇನೆಯು ತನ್ನ ತನಿಖೆಯಲ್ಲಿ ಕಂಡುಕೊಳ್ಳಬೇಕಾಗಿದೆ. ತಮಿಳುನಾಡಿನ ಕುನ್ನೂರಿನಲ್ಲಿ ಡಿಸೆಂಬರ್ 8 ರಂದು ಮಧ್ಯಾಹ್ನ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸೋಣ. ಈ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಏತನ್ಮಧ್ಯೆ, ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ತಮಿಳುನಾಡು ಡಿಜಿಪಿ ಸಿ ಸಿಲೇಂದ್ರ ಬಾಬು ಅವರೊಂದಿಗೆ ನೀಲಗಿರಿ ಜಿಲ್ಲೆಯ ಕುನೂರ್ ಬಳಿ ಹೆಲಿಕಾಪ್ಟರ್ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಮಾಜಿ ಬ್ರಿಗೇಡಿಯರ್ ಸುಧೀರ್ ಸಾವಂತ್ ಕೆಲವು ಪಿತೂರಿಯ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಎಲ್ ಟಿಟಿಯ ಸ್ಲೀಪರ್ ಸೆಲ್ ನ ಷಡ್ಯಂತ್ರ ಇರಬಹುದು ಎಂದು ಹೇಳಿದರು. ಈ ಪ್ರದೇಶದಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTT) ಸಕ್ರಿಯವಾಗಿದೆ. ಘಟನೆಯ ಕುರಿತು ಎನ್‌ಐಎಯಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಮಾಜಿ ಬ್ರಿಗೇಡಿಯರ್ ಎತ್ತಿದ್ದಾರೆ. ಇದೀಗ ಈ ವಾಯುಪಡೆ ತನಿಖೆಗೆ ಆದೇಶಿಸಿದೆ.

IAF chief Air Chief Marshal VR Chaudhari along with Tamil Nadu DGP C Sylendra Babu visits the chopper crash site near Coonoor in Nilgiris district; visuals from near the site

13 people including CDS General Bipin Rawat and his wife lost their lives in the accident yesterday pic.twitter.com/M3dJ5409rL

— ANI (@ANI)

ಉತ್ತರ ಸಿಗದ 5 ಪ್ರಶ್ನೆಗಳು ಇಲ್ಲಿವೆ

ಹೆಲಿಕಾಪ್ಟರ್‌ಗೆ ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಅದೇ ವೇಳೆ ಹೆಲಿಕಾಪ್ಟರ್‌ನ ಬ್ಲಾಕ್ ಬಾಕ್ಸ್ ಇನ್ನೂ ಪತ್ತೆಯಾಗಿಲ್ಲ.

ಮೊದಲ ಪ್ರಶ್ನೆ: ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ಬ್ಲಾಕ್ ಬಾಕ್ಸ್ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಈ ಹೆಲಿಕಾಪ್ಟರ್‌ ದುರಂತಕ್ಕೆ ತಾಂತ್ರಿಕ ದೋಷ, ಹವಾಮಾನ ವೈಪರೀತ್ಯ ಅಥವಾ ಬೇರೆ ಏನು ಕಾರಣ ಎಂದು ತಿಳಿದು ಬಂದಿಲ್ಲ. ಕಪ್ಪು ಪೆಟ್ಟಿಗೆಯು ಪ್ರತಿ ವಿಮಾನದ ಪ್ರಮುಖ ಭಾಗವಾಗಿದೆ. ಇದರಲ್ಲಿ ವಿಮಾನದ ಪ್ರತಿಯೊಂದು ಚಲನೆಯನ್ನು ದಾಖಲಿಸಲಾಗುತ್ತದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ ಎಂದೂ ಕರೆಯಲಾಗುತ್ತದೆ. ಸುರಕ್ಷತೆಗಾಗಿ, ಅದನ್ನು ವಿಮಾನದ ಹಿಂಭಾಗದಲ್ಲಿ ಇರಿಸಲಾಗುತ್ತದೆ ಹಾಗೂ ಇದನ್ನು ಬಲವಾದ ಲೋಹದ ಟೈಟಾನಿಯಂನಿಂದ ಮಾಡಲ್ಪಟ್ಟಿದೆ. ಇದಾದ ನಂತರವೂ ಟೈಟಾನಿಯಂನಿಂದ ಮಾಡಿದ ಪೆಟ್ಟಿಗೆಗೆ ಬೀಗ ಹಾಕಲಾಗುತ್ತದೆ. ಹೀಗಾಗಿ ಯಾವುದೇ ಅಪಘಾತವಾದರೂ ಅದು ಒಡೆಯುವುದಿಲ್ಲ, ಯಾವುದೇ ಹಾನಿಯಾಗುವುದಿಲ್ಲ.

ಎರಡನೇ ಪ್ರಶ್ನೆ: ಸ್ಥಳದಲ್ಲಿದ್ದವರ ಹೇಳಿಕೆಗಳು ಅಪಘಾತಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಆದರೆ, ಕಪ್ಪು ಪೆಟ್ಟಿಗೆ ಪತ್ತೆಯಾದಾಗ ಈ ಅನುಮಾನ ದೂರವಾಗಲಿದ್ದು, ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ.

ಮೂರನೇ ಪ್ರಶ್ನೆ: ಬಿಪಿನ್ ರಾವತ್ ಹೆಲಿಕಾಪ್ಟರ್‌ನಲ್ಲಿದ್ದ ಕಾರಣ ಈ ಅಪಘಾತದ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ದೇಶದ ಶತ್ರು ರಾಷ್ಟ್ರಗಳಿಗೆ ಬಿಪಿನ್ ರಾವತ್ ದೊಡ್ಡ ಟೆನ್ಶನ್ ಆಗಿದ್ದರು. ಇದುವರೆಗೆ ಯಾವುದೇ ಷಡ್ಯಂತ್ರ ಬಹಿರಂಗವಾಗದಿದ್ದರೂ, ಪ್ರತಿಯೊಂದು ಕೋನದಿಂದ ತನಿಖೆ ನಡೆಸಲಾಗುತ್ತಿದೆ.

ನಾಲ್ಕನೇ ಪ್ರಶ್ನೆ: ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಅಪಘಾತದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೆಲಿಕಾಪ್ಟರ್‌ಗೆ ಗಾಳಿಯಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಹೆಲಿಕಾಪ್ಟರ್‌ಗೆ ಗಾಳಿಯಲ್ಲಿಯೇ ತಾಂತ್ರಿಕ ಸಮಸ್ಯೆ ಉಂಟಾಗಿದೆಯೇ ಅಥವಾ ಇನ್ನೇನಾದರೂ ಇದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಐದನೇ ಪ್ರಶ್ನೆ: ಹೆಲಿಕಾಪ್ಟರ್‌ನಲ್ಲಿ ಬರುವ ನ್ಯೂನತೆಯಾಗಿರಲಿ ಅಥವಾ ಇನ್ನಾವುದೋ ಕಾರಣವಿರಲಿ, ಆದರೆ ದೇಶದ ಪ್ರಮುಖ ವ್ಯಕ್ತಿಯೊಬ್ಬರು ಇಂತಹ ಅಪಘಾತದಲ್ಲಿ ಸಾವನ್ನಪ್ಪಿರುವುದು ನಿಜಕ್ಕೂ ಒಂದು ಅಪಾಯ. 

click me!