ಬುಡಕಟ್ಟು ಪ್ರದೇಶದಲ್ಲಿ ರಾಜ್ಯಪಾಲರ ಗ್ರಾಮವಾಸ್ತವ್ಯ

Published : Oct 24, 2019, 08:53 AM IST
ಬುಡಕಟ್ಟು ಪ್ರದೇಶದಲ್ಲಿ ರಾಜ್ಯಪಾಲರ ಗ್ರಾಮವಾಸ್ತವ್ಯ

ಸಾರಾಂಶ

ಬುಡಕಟ್ಟು ಜನರ ಮೂಲಭೂತ ಸಮಸ್ಯೆಗಳನ್ನು ಅರಿಯಲು, ಅಲ್ಲದೆ, ಆ ಜನಾಂಗ ಸಾಮಾಜಿಕವಾಗಿ ಹೇಗೆ ಉಳಿದವರಿಂದ ಬೇರ್ಪಟ್ಟಿದೆ ಎನ್ನುವುದನ್ನು ತಿಳಿಯಲು ತೆಲಂಗಾಣ ರಾಜ್ಯಪಾಲೆ ತಮಿಳಿಸಾಯ್‌ ಸುಂದರ್‌ರಾಜನ್‌ ಬುಡಕಟ್ಟು ಪ್ರದೇಶದಲ್ಲಿ ಉಳಿದುಕೊಳ್ಳಲಿದ್ದಾರೆ. 

ಹೈದರಾಬಾದ್‌ [ಅ.24]: ಬುಡಕಟ್ಟು ಜನಾಂಗದರು ವಾಸವಿರುವ ಸ್ಥಳಗಳಿಗೆ ಭೇಟಿ ನೀಡಿ ಒಂದು ರಾತಿ  ಕಳೆದುಬರಲು ತೆಲಂಗಾಣ ರಾಜ್ಯಪಾಲೆ ಮುಂದಾಗಿದ್ದಾರೆ. 

ಈ ಮೂಲಕ ಬುಡಕಟ್ಟು ಜನರ ಮೂಲಭೂತ ಸಮಸ್ಯೆಗಳನ್ನು ಅರಿಯಲು ಸಾಧ್ಯ. ಅಲ್ಲದೆ, ಆ ಜನಾಂಗ ಸಾಮಾಜಿಕವಾಗಿ ಹೇಗೆ ಉಳಿದವರಿಂದ ಬೇರ್ಪಟ್ಟಿದೆ ಎನ್ನುವುದನ್ನು ತಿಳಿಯಲು ಸಾಧ್ಯವಾಗಲಿದೆ ಎಂದು ರಾಜ್ಯಪಾಲೆ ತಮಿಳಿಸಾಯ್‌ ಸುಂದರ್‌ರಾಜನ್‌ ಅಭಿಪ್ರಾಯಪಟ್ಟಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಬುಡಕಟ್ಟು ಜನಾಂಗದ ಯುವಕರಲ್ಲಿ ಔಷಧೀಯ ಜ್ಞಾನ ಸಾಕಷ್ಟಿರುತ್ತದೆ. ಅವರಿಗೆ ಸೂಕ್ತ ರೀತಿಯ ವೈದ್ಯಕೀಯ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದ ಅವರು ಮುಲುಗು ಜಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದರು. 

ಇದೇ ವೇಳೆ ತಾವು ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸ್ನೇಹಿತ ಜೊತೆ ಅಂಡಮಾನ್‌ ದ್ವೀಪಕ್ಕೆ ಭೇಟಿ ನೀಡಿ ವೈದ್ಯಕೀಯ ಸೇವೆ ಸಲ್ಲಿಸಿದ ದಿನಗಳನ್ನೂ ಮೆಲುಕುಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?