158 ತುರ್ತು ಸಾಲ ಆ್ಯಪ್‌ ನಿಷೇಧಕ್ಕೆ ತೆಲಂಗಾಣ ಮೊರೆ!

Published : Dec 28, 2020, 11:24 AM IST
158 ತುರ್ತು ಸಾಲ ಆ್ಯಪ್‌ ನಿಷೇಧಕ್ಕೆ ತೆಲಂಗಾಣ ಮೊರೆ!

ಸಾರಾಂಶ

158 ತುರ್ತು ಸಾಲ ಆ್ಯಪ್‌ ನಿಷೇಧಕ್ಕೆ ತೆಲಂಗಾಣ ಮೊರೆ| ಗೂಗಲ್‌ಗೆ ಪ್ರಸ್ತಾವ ಸಲ್ಲಿಸಿದ ಪೊಲೀಸರು

ಹೈದರಾಬಾದ್(ಡಿ.28)‌: ತುರ್ತು ಸಾಲ ನೀಡಿ ಅದರ ವಸೂಲಾತಿಗೆ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಕೃತ್ಯದಲ್ಲಿ ಭಾಗಿಯಾದ 14 ಮಂದಿಯ ಬಂಧನದ ಬೆನ್ನಲ್ಲೇ, ತುರ್ತು ಸಾಲ ಸೌಲಭ್ಯ ಕಲ್ಪಿಸುವ 158 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಲ್ಲಿ ಬ್ಲಾಕ್‌ ಮಾಡುವಂತೆ ಗೂಗಲ್‌ಗೆ ತೆಲಂಗಾಣ ಪೊಲೀಸರು ಸೂಚನೆ ನೀಡಿದ್ದಾರೆ. ಈ ಕುರಿತ ತಮ್ಮ ಪ್ರಸ್ತಾವನೆಗೆ ಗೂಗಲ್‌ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಎಂದು ಹೈದರಾಬಾದ್‌ ಜಂಟಿ ಪೊಲೀಸ್‌ ಆಯುಕ್ತ ಅವಿನಾಶ್‌ ಮೊಹಂತಿ ಹೇಳಿದ್ದಾರೆ.

ಸುಲಿಗೆ ಕೇಸ್‌ನಲ್ಲಿ ಚೀನಾ ನಾಗರಿಕರ ಪಾತ್ರವೂ ಬಹಿರಂಗವಾದ ಹಿನ್ನೆಲೆ ಈ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ(ಇ.ಡಿ)ವೂ ಪ್ರವೇಶ ಪಡೆದಿದ್ದು, ತೆಲಂಗಾಣ ಪೊಲೀಸರಿಂದ ಈ ಕುರಿತಾದ ಮಾಹಿತಿಗಳನ್ನು ಕ್ರೋಢೀಕರಿಸುತ್ತಿದೆ ಎಂದು ತಿಳಿದುಬಂದಿದೆ.

ಚೀನಾ ಪ್ರಜೆ ಸೇರಿ ಮೂವರ ಸೆರೆ:

ತುರ್ತು ಸಾಲ ನೀಡಿಕೆಯ ಆ್ಯಪ್‌ಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ತೆಲಂಗಾಣ ಪೊಲೀಸರು, ತುರ್ತು ಸಾಲದ ವಸೂಲಾತಿಗಾಗಿ ಸಾಲ ಪಡೆದವರಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಪುಣೆ ಮೂಲದ ಕಾಲ್‌ಸೆಂಟರ್‌ ಅನ್ನು ಪತ್ತೆ ಹಚ್ಚಿದ್ದಾಗಿ ಹೇಳಿದ್ದಾರೆ. ಅಲ್ಲದೆ ಭಾನುವಾರದ ಈ ಕಾರಾರ‍ಯಚರಣೆಯಲ್ಲಿ ಚೀನಾದ ಮಹಿಳೆ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ಆ್ಯಪ್‌ಗಳ ಮೂಲಕ ಜನರಿಗೆ ತುರ್ತು ಸಾಲಗಳನ್ನು ನೀಡಿ ಆ ಬಳಿಕ ಅದರ ವಸೂಲಾತಿಗಾಗಿ ಈ ಕಂಪನಿಗಳು ದಬ್ಬಾಳಿಕೆ ಮತ್ತು ಸಾರ್ವಜನಿಕವಾಗಿ ಅವರ ಹೆಸರುಗಳನ್ನು ಸುಸ್ತಿದಾರರೆಂದು ಪ್ರಕಟಿಸಿ ಅವಮಾನಿಸುತ್ತಿದ್ದರು. ಇದರಿಂದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ತನಿಖೆ ವೇಳೆ ಈ 158 ಆ್ಯಪ್‌ಗಳ ಮರ್ಮ ಬಯಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!