ಏರ್‌ಇಂಡಿಯಾ ವಿಮಾನ ದುರಂತಕ್ಕೆ ತಾಂತ್ರಿಕ ಸಮಸ್ಯೆ ಕಾರಣವಾಯ್ತೇ?

Kannadaprabha News   | Kannada Prabha
Published : Jul 18, 2025, 04:26 AM IST
Air India Plane Crash

ಸಾರಾಂಶ

260 ಮಂದಿ ಸಾವಿಗೆ ಕಾರಣವಾದ ಅಹಮದಾಬಾದ್‌ ಏರ್‌ಇಂಡಿಯಾ ವಿಮಾನ ದುರಂತಕ್ಕೆ ವಿಮಾನದ ಎಲೆಕ್ಟ್ರಿಕಲ್‌ ಮತ್ತು ಸಾಫ್ಟ್‌ವೇರ್‌ ವಿಭಾಗದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಕಾರಣವಾಯಿತೇ? ಇಂಥದ್ದೊಂದು ಪ್ರಶ್ನೆ ಇದೀಗ ತನಿಖಾಧಿಕಾರಿಗಳನ್ನೂ ಕಾಡುತ್ತಿದ್ದು, ಈ ಕುರಿತ ಪರಿಶೀಲನೆ ಮುಂದುವರಿದಿದೆ.

ನವದೆಹಲಿ: 260 ಮಂದಿ ಸಾವಿಗೆ ಕಾರಣವಾದ ಅಹಮದಾಬಾದ್‌ ಏರ್‌ಇಂಡಿಯಾ ವಿಮಾನ ದುರಂತಕ್ಕೆ ವಿಮಾನದ ಎಲೆಕ್ಟ್ರಿಕಲ್‌ ಮತ್ತು ಸಾಫ್ಟ್‌ವೇರ್‌ ವಿಭಾಗದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಕಾರಣವಾಯಿತೇ? ಇಂಥದ್ದೊಂದು ಪ್ರಶ್ನೆ ಇದೀಗ ತನಿಖಾಧಿಕಾರಿಗಳನ್ನೂ ಕಾಡುತ್ತಿದ್ದು, ಈ ಕುರಿತ ಪರಿಶೀಲನೆ ಮುಂದುವರಿದಿದೆ.

ಸದ್ಯ ವಿಮಾನದ ಇಂಧನದ ಸ್ವಿಚ್‌ ಆಫ್‌ ಆಗಿದ್ದರ ಸುತ್ತವೇ ತನಿಖೆ ಕೇಂದ್ರೀಕೃತವಾಗಿದೆ. ಹೀಗಾಗಿ ಎಲೆಕ್ಟ್ರಿಕಲ್‌ ಮತ್ತು ಸಾಫ್ಟ್‌ವೇರ್‌ ವಿಭಾಗದಲ್ಲಿ ಕಾಣಿಸಿಕೊಂಡ ಸಮಸ್ಯೆಯು ಪೈಲಟ್‌ ಕಂಟ್ರೋಲ್‌ ವ್ಯವಸ್ಥೆಗೆ ಇಂಧನದ ಸ್ವಿಚ್‌ ಆಫ್‌ ಆಗಿದೆ ಎಂಬ ತಪ್ಪು ಸಂದೇಶ ಕಳುಹಿಸಿ ಎಡವಟ್ಟು ಸೃಷ್ಟಿಸಿತೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.

ಈ ವಿಮಾನ ದೆಹಲಿಯಿಂದ ಅಹಮದಾಬಾದ್‌ಗೆ ಬಂದಾಗಲೇ ಸ್ಟೆಬಿಲೈಸರ್‌ ಪೊಸಿಷನ್‌ ಟ್ರಾನ್ಸ್ಯುಡ್ಸರ್‌ ಡಿಫೆಕ್ಟ್‌ ಗಮನಕ್ಕೆ ಬಂದಿತ್ತು. ಈ ಕುರಿತು ಪೈಲಟ್‌ ನೀಡಿದ ದೂರಿನಂತೆ ಅದನ್ನು ರಿಪೇರಿ ಕೂಡ ಮಾಡಲಾಗಿತ್ತು ಎಂದು ಹೇಳಲಾಗಿದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ.

ಏನಿದು ಸ್ಟೆಬಿಲೈಸರ್‌ ಪೊಸಿಷನ್‌ ಟ್ರಾನ್ಸ್ಯುಡ್ಸರ್‌?:

ಇದು ಮೂಲತಃ ಒಂದು ಸೆನ್ಸರ್‌ ಆಗಿದ್ದು, ವಿಮಾನದ ಪಿಚ್‌(ವಿಮಾನದ ಮೂತಿಯನ್ನು ಮೇಲೆ ಕೆಳಗೆ ಮಾಡುವ ಪ್ರಕ್ರಿಯೆ)ನ ದಿಕ್ಕನ್ನು ನಿಯಂತ್ರಿಸುವ ಮತ್ತು ಹಾರಾಟ ನಿಯಂತ್ರಣ ವ್ಯವಸ್ಥೆಗೆ ಎಲೆಕ್ಟ್ರಿಕ್‌ ಸಂಕೇತಗಳ ರೂಪದಲ್ಲಿ ಡೇಟಾ ರವಾನಿಸುವ ಕೆಲಸ ಮಾಡುತ್ತದೆ. ಈ ಮೂಲಕ ಪೈಲಟ್‌ಗೆ ಇನ್‌ಪುಟ್‌ ನೀಡುವ ಪ್ರತಿಕ್ರಿಯೆ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.

ದುರಂತಕ್ಕೀಡಾದ ವಿಮಾನ ಲಂಡನ್‌ಗೆ ಹಾರುವ ಮೊದಲು ಕಾಣಿಸಿಕೊಂಡಿದ್ದ ಸ್ಟೆಬಿಲೈಸರ್‌ ಪೊಸಿಷನ್‌ ಟ್ರಾನ್ಸ್ಯುಡ್ಸರ್‌ ಡಿಫೆಕ್ಟ್‌ ಅನ್ನು ಬೋಯಿಂಗ್‌ನ ಪ್ರೊಸೀಜರ್‌ ಪ್ರಕಾರ ಎಂಜಿನಿಯರ್‌ಗಳು ಸರಿಪಡಿಸಿದ್ದರು.

ಈ ಸಮಸ್ಯೆಗಳು ಯಾಕೆ ಗಂಭೀರವೆಂದರೆ, ಇವು ದಿಢೀರ್‌ ಆಗಿ ಇಂಧನ ಸ್ವಿಚ್‌ ಬಂದ್‌ ಆಗಿದೆ ಎಂಬ ಸಿಗ್ನಲ್‌ ಸೇರಿ ಫ್ಲೈಟ್‌ ಕಂಟ್ರೋಲ್‌ ವ್ಯವಸ್ಥೆಗೆ ಹಲವು ತಪ್ಪು ಸಂದೇಶಗಳನ್ನು ರವಾನಿಸುವ ಸಾಧ್ಯತೆಗಳಿರುತ್ತವೆ. ಆದರೆ, ವಿಮಾನ ದುರಂತಕ್ಕೆ ಇದೊಂದೇ ಸಮಸ್ಯೆ ಮೂಲ ಕಾರಣವಾಗಿರಲಿಕ್ಕಿಲ್ಲ. ಈ ಸಮಸ್ಯೆ ಹಲವು ಸೆನ್ಸರ್‌ಗಳ ವೈಫಲ್ಯಕ್ಕೆ ಕಾರಣವಾಗಿ ಕೊನೆಗೆ ಮಹಾದುರಂತಕ್ಕೆ ಮುನ್ನುಡಿ ಬರೆದಿರುವ ಸಾಧ್ಯತೆಯೂ ಇಲ್ಲದಿಲ್ಲ. ಈ ಕುರಿತು ಕೂಲಂಕಶ ತನಿಖೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ