‘ಮೋದಿ, ಶಾ ಮುಗಿಸಿ’ ಎಂದಿದ್ದ ವಿಚಾರವಾದಿ ಬಂಧನ!

Published : Jan 02, 2020, 09:37 AM ISTUpdated : Jan 02, 2020, 11:19 AM IST
‘ಮೋದಿ, ಶಾ ಮುಗಿಸಿ’ ಎಂದಿದ್ದ ವಿಚಾರವಾದಿ ಬಂಧನ!

ಸಾರಾಂಶ

‘ಮೋದಿ, ಶಾ ಮುಗಿಸಿ’ ಎಂದಿದ್ದ ತಮಿಳು ಚಿಂತಕ ಕಣ್ಣನ್‌ ಬಂಧನ| ಅಮಿತ್ ಶಾ ಮತ್ತು ಮೋದಿಯನ್ನು ಮುಸ್ಲಿಮರು ಇನ್ನೂ ಏಕೆ ಮುಗಿಸಿಲ್ಲವೋ ಗೊತ್ತಿಲ್ಲ ಎಂದಿದ್ದ ವಿಚಾರವಾದಿ

ಚೆನ್ನೈ[ಜ.02]: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮುಸ್ಲಿಮರು ಇನ್ನೂ ಏಕೆ ಮುಗಿಸಿಲ್ಲವೋ ಗೊತ್ತಿಲ್ಲ. ಮೋದಿ ಅವರ ಮಿದುಳು ಶಾ. ಇಬ್ಬರನ್ನೂ ಇಷ್ಟೊತ್ತಿಗೇ ಮುಗಿಸಿಬಿಡಬೇಕಿತ್ತು. ಅದು ಯಾಕೆ ಸಾಧ್ಯವಾಗಿಲ್ಲವೋ ಗೊತ್ತಿಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ವಿಚಾರವಾದಿ ನೆಲ್ಲೈಕಣ್ಣನ್‌ ಅವರನ್ನು ಪೆರಂಬಲೂರಿನಲ್ಲಿ ಭಾನುವಾರ ಬಂಧಿಸಲಾಗಿದೆ.

ಏನಿದು ವಿವಾದ?

ಪೌರತ್ವ ಕಾಯ್ದೆ ವಿರೋಧಿಸಿ ಎಸ್‌ಡಿಪಿಐ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ತಮಿಳು ವಿಚಾರವಾದಿ ನೆಲ್ಲೈ ಕಣ್ಣನ್‌ ‘ಅಮಿತ್‌ ಶಾ ಪ್ರಧಾನಿ ಮೋದಿ ಅವರ ಮೆದುಳಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಮುಗಿಸಿದರೆ, ಮೋದಿ ಕಥೆಯೂ ಮುಗಿದಂತೆ. ಹೀಗಾಗಿಯೇ ಮೊದಲು ಅವರನ್ನು ಮುಗಿಸಬೇಕು. ಪೌರತ್ವ ವಿರೋಧಿ ಹೋರಾಟದ ವೇಳೆಯೇ ಇಂಥದ್ದೊಂದು ಆಗಲಿ ಎಂದು ನಾನು ಕಾಯುತ್ತಿದ್ದೇನೆ. ಆದರೆ ಮುಸ್ಲಿಮರು ಏನೂ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana