'ವಿದೇಶಿ ಕಂಪನಿಗಳು ಭಾರತ ತೊರೆಯಿರಿ..' ಟ್ರಂಪ್ ಸುಂಕದ ವಿರುದ್ಧ ಸಿಡಿದೆದ್ದ ಸ್ವದೇಶಿ ಜಾಗರಣ್ ಮಂಚ್ , ಅಮೆರಿಕನ್ ಕಂಪನಿಗಳ ಬಹಿಷ್ಕರಿಸುವಂತೆ ಕರೆ!

Published : Aug 09, 2025, 08:17 PM ISTUpdated : Aug 09, 2025, 08:43 PM IST
Swadeshi Jagran Manch on Trump tarriff

ಸಾರಾಂಶ

ಅಮೆರಿಕದ ಸುಂಕ ಹೆಚ್ಚಳದ ವಿರುದ್ಧ ಆರ್‌ಎಸ್‌ಎಸ್ ಬೆಂಬಲಿತ ಸ್ವದೇಶಿ ಜಾಗರಣ್ ಮಂಚ್ ದೇಶಾದ್ಯಂತ ಬೃಹತ್ ಅಭಿಯಾನ ಆರಂಭಿಸಿದೆ. ಆಗಸ್ಟ್ 9 ರಿಂದ 'ಸ್ವದೇಶಿ ಸುರಕ್ಷಾ ಸ್ವಲಂಬನ್' ಹೆಸರಿನಲ್ಲಿ ಈ ಅಭಿಯಾನ ನಡೆಯಲಿದ್ದು, ವಿದೇಶಿ ಕಂಪನಿಗಳ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.

ನವದೆಹಲಿ (ಆ.9): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವುದನ್ನು ವಿರೋಧಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬೆಂಬಲಿತ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) 'ವಿದೇಶಿ ಕಂಪನಿಗಳು ಭಾರತವನ್ನು ತೊರೆಯಿರಿ' ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ಬೃಹತ್ ಅಭಿಯಾನಕ್ಕೆ ಮುಂದಾಗಿದೆ.

ಈ ಅಭಿಯಾನವು 1942ರ ಬ್ರಿಟಿಷ್ ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲಿ ಆಗಸ್ಟ್ 9 ರಿಂದ 'ಸ್ವದೇಶಿ ಸುರಕ್ಷಾ ಸ್ವಲಂಬನ್' ಹೆಸರಿನಲ್ಲಿ ಪ್ರಾರಂಭವಾಗಲಿದೆ. ಆಗಸ್ಟ್ 10ರ ಸಂಜೆ 5 ಗಂಟೆಗೆ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.

ಸ್ವದೇಶಿ ಜಾಗರಣ್ ಮಂಚ್‌ನ ರಾಷ್ಟ್ರೀಯ ಸಹ-ಸಂಚಾಲಕ ಡಾ. ಅಶ್ವನಿ ಮಹಾಜನ್, ಅಮೆಜಾನ್, ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್, ಕೋಕಾ-ಕೋಲಾ, ಪೆಪ್ಸಿ, ಕೆಎಫ್‌ಸಿ ಮುಂತಾದ ಅಮೆರಿಕನ್ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ಸ್ವದೇಶಿ ಉತ್ಪನ್ನಗಳನ್ನ ಬಳಸಿ:

'ಸ್ವದೇಶಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳಿ, ಭಾರತೀಯ ಇ-ಕಾಮರ್ಸ್ ವೇದಿಕೆಗಳನ್ನು ಬೆಂಬಲಿಸಿ,' ಎಂದು ಅವರು ಮನವಿ ಮಾಡಿದ್ದಾರೆ. ಟ್ರಂಪ್ ಈ ಹಿಂದೆ ಶೇ.25ರಷ್ಟು ಸುಂಕ ವಿಧಿಸಿದ್ದರು, ಆದರೆ ಇತ್ತೀಚೆಗೆ ಇದನ್ನು ಶೇ.50ಕ್ಕೆ ಹೆಚ್ಚಿಸಿದ್ದಾರೆ, ಇದು ಯಾವುದೇ ದೇಶದ ಮೇಲೆ ಅಮೆರಿಕ ವಿಧಿಸಿದ ಅತ್ಯಧಿಕ ಸುಂಕವಾಗಿದೆ. ಈ ಸುಂಕವು ಆಗಸ್ಟ್ 30 ರಿಂದ ಜಾರಿಗೆ ಬರಲಿದೆ. ಸ್ವದೇಶಿ ಜಾಗರಣ್ ಮಂಚ್ ಈ ಅಭಿಯಾನದ ಮೂಲಕ ದೇಶದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಹಕರಿಸಿ, ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ಮತ್ತು ವಿದೇಶಿ ಕಂಪನಿಗಳ ಪ್ರಭಾವವನ್ನು ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..